Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Feature ArticleLocal NewsPolitics NewsState News

ಸಿಎಂ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವರಿಷ್ಠರ ನಿರ್ಧಾರ- ಸತೀಶ ಜಾರಕಿಹೊಳಿ

ಸಿಎಂ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವರಿಷ್ಠರ ನಿರ್ಧಾರ- ಸತೀಶ ಜಾರಕಿಹೊಳಿ

ರಾಯಚೂರು: ಮುಖ್ಯಮಂತ್ರಿಗಳ , ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ ಹೊರತು ನಾವು ಚರ್ಚೆ ಮಾಡಿದರೆ ಆಗುವದಿಲ್ಲ , ನಮ್ಮ ಸ್ಥಾನ ಉಳಿದರೆ ಸಾಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳೆ ಹೇಳಿದರು.

ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೇ ರೀತಿ ಆಡಳಿತ ನೀಡುತ್ತಿದೆ.ಜನರಿಗೆ ಯೋಜನೆಗಳು ತಲುಪುತ್ತಿವೆ. ನಮಗೆ ಹೇಳುವ ಅಧಿಕಾರ ಇಲ್ಲ ಪಕ್ಷ ವರಿಷ್ಟರನ್ನು ಕೇಳಿದರೆ ಗೊತ್ತಾಗುತ್ತದೆ . ಮಾಜಿ ಸಚಿವ ಎಚ್.ವಿಶ್ವನಾಥ ಹೇಳಿಕೆ ಟಾಂಗ್ ನೀಡಿದ ಅವರು ಅವರು ನಮ್ಮ ಪಕ್ಷದವರೇ ಅಲ್ಲ. ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಲುಅರ‍್ಯಾರು ಎಂದು ಪ್ರಶ್ನಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುತ್ತಾರೆ ಇಲ್ಲವೋ ಎನ್ನವದನ್ನು ಅವರೇ ಹೇಳಬೇಕು. ಯರ‍್ಯಾರು ಮಾತನಾಡಿದರೆ ಬದಲಾಗದು ಎಂದಷ್ಟೇ ಹೇಳಿದರು.

ದಿನ ನಿತ್ಯದ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್್ಗೆ ಭೇಟಿ ನೀಡಿ: https://youtu.be/FhS-RAFIrlk?si=tZ_K_Vbv5b8o3NT2

ಜಾತಿ ಸಮೀಕ್ಷೆ ಕುರಿತಂತೆ ವಿವಿಧ ಸಮೂದಾಯಗಳ ಆಕ್ಷೇಪದ ಹಿನ್ನಲೆಯಲ್ಲಿ ಮರು ಸಮೀಕ್ಷೆಗೆ ಪಕ್ಷದ ವರಿಷ್ಟರು ಸೂಚಿಸಿದ್ದಾರೆ. ಈ ಹಿಂದೆ 160 ಕೋಟಿ ರೂ ವ್ಯಯವಾಗಿದೆ. ಆದರೆ ಏಳು ಕೋಟಿ ಜನರ ಅಭಿಪ್ರಾಯವನ್ನುಗೌರವಿಸುವದು ಮುಖ್ಯವಾಗುತ್ತದೆ. ಮರು ಸಮೀಕ್ಷೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.ರಾಷ್ಟರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅನುದಾನ ಕೊರತೆಯಿಲ್ಲ. ರಾಜ್ಯದಲ್ಲಿ 50 ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳಲ್ಲಿ 30 ಪೂರ್ಣಗೊಂಡಿವೆ. 20 ಪ್ರಗತಿಯ ಹಂತದಲ್ಲಿವೆ.ರಾಯಚೂರಿನಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡುವಪ್ರಸ್ತಾವನೆಯಿದೆ. ಇಲಾಖೆ ಹಂತದಲ್ಲಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ ಎಂದರು. ಜುರಾಲಾ ಯೋಜನೆಯಡಿ ಬಾಕಿಯಿರುವ ಸೇತುವೆ ನಿರ್ಮಾಣದ ಕುರಿತಂತೆ ಇಲಾಖೆ ಅಧಿಕಾರಿಗಳೊಂದಿಗೆ ನಿರ್ಧರಿಸಲಾಗುತ್ತದೆ ಎಂದರು.

ಈ ಸಂದರ್ಬದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಸಂಸದ ಜಿ.ಕುಮಾರನಾಯಕ, ಮಹ್ಮದ ಶಾಲಂ ಇದ್ದರು.

Megha News