Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಆಕಳು ಮೇಲೆ ಕ್ರೂರ ಪ್ರಾಣಿ ದಾಳಿ, ಚಿರತೆ ದಾಳಿ ಶಂಕೆ, ಭಯದ ಬೀತಿಯಲ್ಲಿ ಗ್ರಾಮಸ್ಥರು

ಆಕಳು ಮೇಲೆ ಕ್ರೂರ ಪ್ರಾಣಿ ದಾಳಿ, ಚಿರತೆ ದಾಳಿ ಶಂಕೆ, ಭಯದ ಬೀತಿಯಲ್ಲಿ ಗ್ರಾಮಸ್ಥರು

ರಾಯಚೂರು. ಧನದ ಕೊಟ್ಟಿಗೆಗೆ ರಾತ್ರಿ ಕ್ರೂರ ಪ್ರಾಣಿಯೊಂದು ಆಕಳು ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದ ಘಟನೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕರಿಯಪ್ಪ ತಾತನ ದೇವಸ್ಥಾನದ ಹತ್ತಿರವಿರುವ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳ ಮೇಲೆ ದಾಳಿ ನಡೆಸಿ ತಿಂದು ಹಾಕಿದೆ ಎನ್ನಲಾಗಿದೆ. ಸ್ಥಳೀಯ ಜನರು ಚಿರತೆ ದಾಳಿ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ಆಕಳು ಮೇಲೆ ಯಾವ ಪ್ರಾಣಿ ದಾಳಿ ಮಾಡಿದೆ ಎಂಬುವುದು ಇನ್ನು ಮಾಹಿತಿ ಲಭ್ಯವಾಗಿಲ್ಲ, ಒಟ್ಟಾರೆಯಾಗಿ ಗ್ರಾಮದಲ್ಲಿ ಆಕಳು ಮೇಲೆ ದಾಳಿ ಮಾಡಿದ ಕ್ರೂರ ಪ್ರಾಣಿಯಿಂದಾಗಿ ಜನರು ಭಯ ಭೀತರಾಗಿದ್ದಾರೆ.

Megha News