Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ನಿಯಂತ್ರಣ ತಪ್ಪಿ ಉರುಳಿಬಿದ್ದ ಪ್ರವಾಸಕ್ಕೆ ತೆರಳಿದ ಕೆಕೆಆರ್‌ಟಿಸಿ ಬಸ್, ಮಕ್ಕಳಿಗೆ ಸಣ್ಣಪುಟ್ಟ ಗಾಯ

ನಿಯಂತ್ರಣ ತಪ್ಪಿ ಉರುಳಿಬಿದ್ದ ಪ್ರವಾಸಕ್ಕೆ ತೆರಳಿದ ಕೆಕೆಆರ್‌ಟಿಸಿ ಬಸ್, ಮಕ್ಕಳಿಗೆ ಸಣ್ಣಪುಟ್ಟ ಗಾಯ

ರಾಯಚೂರು. ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿ ಗದ್ದೆಗೆ ಉರುಳಿ ಬಿದ್ದ ಘಟನೆ ದೇವದುರ್ಗ ತಾಲೂಕಿನ ಅಂಜಳಾ ಕ್ರಾಸ್ ಬಳಿ ನಡೆದಿದೆ.

ಬೆಳಗಿನ ಜಾವದಲ್ಲಿ ಘಟನೆ ನಡೆದಿದ್ದು, ಮಕ್ಕಳಿಗೆ ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,ಘಟನೆ ಬಳಿಕ ಬೆಳಗಿನವರೆಗೆ ಮಕ್ಕಳು ಶಿಕ್ಷಕರು ಚಳಿಯಲ್ಲೆ ಪರದಾಡಿದ್ದಾರೆ.
ದೇವದುರ್ಗ ಘಟಕದಿಂದ ಮಕ್ಕಳನ್ನು ಮತ್ತೊಂ ದು ಬಸ್ ಕಳುಹಿಸಿ ಕರೆದುಕೊಂಡು ಹೋ ಗಲಾಗಿದೆ.
ಘಟನೆ ವಿವರ:
ಬೆಳಗಿನ ಜಾವದಲ್ಲಿ ಕೆಕೆಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಇದರಿಂದ ಮಕ್ಕಳಿಗೆ ಸಣ್ಣಪುಟ್ಟ
ಗಾಯಗಳಾಗಿವೆ. ಬಳಿಕ ಕೆಕೆಆರ್‌ಟಿಸಿ ಘಟಕಕ್ಕೆ ಮಾಹಿತಿ ನೀಡಿದ ಬಳಿಕ ಬದಲಿ ಬಸ್ ವ್ಯವಸ್ಥೆ ಮಾಡಿಕೊಡಲಾಗಿತ್ತು.

Megha News