Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಶೌರ್ಯ ಜಾಗರಣ ರಥಯಾತ್ರೆಗೆ ಅದ್ದೂರಿ ಚಾಲನೆ

ಶೌರ್ಯ ಜಾಗರಣ ರಥಯಾತ್ರೆಗೆ ಅದ್ದೂರಿ ಚಾಲನೆ

ರಾಯಚೂರು.ಶೌರ್ಯ ಜಾಗರಣ ರಥಯಾತ್ರೆಗೆ ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾ ಸ್ವಾಮಿಗಳು ಚಾಲನೆ ನೀಡಿದರು.

ನಗರದ ಜಿಲ್ಲೆದ್ ಬೃಹನ್ಮಠದಲ್ಲಿಂದು ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳ ವತಿಯಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗರ ಣಾ ರಥಯಾತ್ರೆಗೆ ದೇವಸುಗೂರಿನ ಮೂಲಕ ನಗರಕ್ಕೆ ಆಗಮಿಸಿದ್ದು ನಗರದ ಕಿಲ್ಲೆದ್ ಬೃಹನ್ಮಠದಲ್ಲಿ ಸ್ವಾಗತಿಸಲಾಯಿತು.
ನಂತರ ನಗರದಿಂದ ಮಾನವಿಗೆ ರಥಯಾತ್ರೆ ತೆರಳುತ್ತಿದ್ದು ಕಿಲ್ಲೆದ್ ಬೃಹನ್ಮಠ ಶಾಂತ ಮಲ್ಲಾ ಶಿವಾಚಾರ್ಯರು ಚಾಲನೆ ನೀಡಿದರು.
ಶೋಭಾಯಾತ್ರೆಯು ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿತು, ನಂತರ ಮಟಮಾರಿ ಗ್ರಾಮದ ಮೂಲಕ ಕುರ್ಡಿ ಗ್ರಾಮಕ್ಕೆ ತೆರಳಿ ಅಲ್ಲಿಂದ ಮಾನವಿ ನಗರಕ್ಕೆ ಪ್ರವೇಶ ಮಾಡಲಿದೆ.
ಅ.15 ರಂದು ನಾಳೆ ಮಾನವಿ ನಗರದಲ್ಲಿ ಸಮಾರೋಪ ಸಮಾರಂಭ ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಬಜರಂಗ ದಳ ಉತ್ತರ ಪ್ರಾಂತ ಸಂಯೋಜಕ ಪುಂಡಲಿಕ ದಳವಾಯಿ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ವೈ.ಗೋಪಾಲರೆಡ್ಡಿ, ಬಿ‌.ಗೋವಿಂದ, ಬಂಡೇಶ ವಲ್ಕಂದಿನ್ನಿ, ಚಂದ್ರಶೇಖರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು.

Megha News