Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಎಪಿಎಂಸಿ ಅಧ್ಯಕ್ಷ ಹಾಗೂ ೧೧ ಜನ ಸಮಿತಿ ಮುಂದುವರೆಸಿ ಮತ್ತೋಂದು ಆದೇಶ

ಎಪಿಎಂಸಿ ಅಧ್ಯಕ್ಷ ಹಾಗೂ ೧೧ ಜನ ಸಮಿತಿ ಮುಂದುವರೆಸಿ ಮತ್ತೋಂದು ಆದೇಶ

ರಾಯಚೂರು,ಜು‌.೮- ಕಾಂಗ್ರೆಸ್ ಪಕ್ಷದ ಒಳಜಗಳ ಎಪಿಎಂಸಿ ಮಂಡಳಿ ನೇಮಕಾತಿಯಲ್ಲಿ ಬಲಾಬಲ ಪ್ರದರ್ಶನಕ್ಕೆ ಕಾರಣವಾಗಿದೆ. ಶನಿವಾರವಷ್ಟೆ ಎಪಿಎಂಸಿ ಅಧ್ಯಕ್ಚರಾಗಿ ಮಲ್ಲಿಕಾರ್ಜುನ ಗೌಡ ತಲಮಾರಿ ಹಾಗೂ ೧೪ ಜನ ನಿರ್ದೇಶಕ ರ ನೇಮಕಾತಿಗೆ ನೀಡಲಾಗಿದ್ದ ತಡೆ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.

೧೪ ಜನ ನಿರ್ದೇಶಕ ರ ಪೈಕಿ ಬೀಮರೆಡ್ಡಿ ಮಡ್ಡಿಪೇಟಿ, ರಘುನಾಥರೆಡ್ಡಿ ಬುರ್ದಿಪಾಡ ಹಾಗೂ ಟಿ.ಈರಣ್ಣ ಇವರನ್ನು ಹೊರತುಪಡಿಸಿ ಉಳಿದ ೧೧ ಜನರ ನೇಮಕಾತಿ  ಆದೇಶವನ್ನು ಮುಂದುವೆರೆಸಲಾಗಿದೆ. ೨೪ ಗಂಟೆಯಲ್ಲಿ ಮೂರುರು ಆದೇಶವನ್ನು ಸಹಕಾರ ಇಲಾಖೆ ಹೊರಡಿಸಿದೆ.ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಹಾಗೂ ಸಚಿವ ಎನ್.ಎಸ್.ಬೋಸರಾಜು ಬಣಗಳ ಮಧ್ಯೆ ನಡೆಯುತ್ತಿರುವ ಜಿದ್ದಾಜಿದ್ದಿಗೆ ಕಾರ್ಯಕರ್ತರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಎರಡನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆಯಿದ್ದು ಈ ಮಧ್ಯೆ ಅಧಿಕಾರ ಸ್ವೀಕಾರ ಸಮಾರಂಭ ನಿಗದಿಯಾಗಿದೆ. ಮುಂದೆ ಏನಾಗುತ್ತದೆಯೋ ಎಂಬ ಕುತೂಹಲ ಮುಂದುವರೆದಿದೆ.

Megha News