Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ವಿವಿಧ ಸಮಾಜಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ – ಎ.ಪಾಪಾರೆಡ್ಡಿ

ವಿವಿಧ ಸಮಾಜಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ – ಎ.ಪಾಪಾರೆಡ್ಡಿ

ರಾಯಚೂರು.ನಗರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಸಮಾಜವೂ ತಮ್ಮದೇ ಆದ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೈಭವಕರಣದಿಂದ ಆಯೋಜಿಸುವ ಮೂಲಕ ಪ್ರತಿಭಾನ್ವಿತ ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸುವರೊಂದಿಗೆ ಈ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ರೀತಿಯಲ್ಲಿ ನಡೆಯುವ ಆಯೋಜನೆ ಮಾಡಬೇಕು ಎಂದು ಸಾಂಸ್ಕೃತಿಕ ರೂವಾರಿ, ಮುನ್ನೂರು ಕಾಪು ಸಮಾಜದ ಹಿರಿಯರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು ಹೇಳಿದರು.

ನವರಾತ್ರಿ ಉತ್ಸವದ ಅಂಗವಾಗಿ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕತೆ ಇದೆ ಎಂದರು.ಜಿಲ್ಲೆಯ ಎಲ್ಲಾ ಸಮುದಾಯದ ಜನರು ಇಂತಹ ಕಾರ್ಯಕ್ರಮ ಆಯೋಜನೆಯಿಂದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಸಾಂಸ್ಕೃತಿಕ ಪರಂಪರೆ ರಕ್ಷಣೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಇಂದಿನ ಕಾಲಘಟ್ಟದಲ್ಲಿ ಈ ಭಾಗದ ಸಾಂಸ್ಕೃತಿಕ ಪ್ರತಿಭೆ. ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿತ್ತು. ಆದರೆ, ನಂತರದ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದು ಅನೇಕ ಪ್ರತಿಭೆಗಳು ಅವಕಾಶ ವಂಚಿತಗೊಳ್ಳುವಂತಾಗಿವೆ. ಈ ಹಿಂದೆ ಬ್ರಾಹ್ಮಣ, ವೈಶ್ಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ಕಾರ್ಯಕ್ರಮಗಳು ಕ್ಷೀಣಿಸಿದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ, ಕೇವಲ ಮೈಸೂರು, ಬೆಂಗಳೂರು ಭಾಗ ಎನ್ನುವಂತಾಗಿದೆ.
ಆದರೆ, ಮೂಲತಃ ಮುನ್ನೂರುಕಾಪು ಸಮಾಜ ಕೃಷಿ ಅವಲಂಬಿತದಿಂದ ಕಳೆದ 24 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ಹಬ್ಬದೊಂದಿಗೆ
ಈಗ ದಸರಾ ನವರಾತ್ರೋತ್ಸವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಭಾಗದಲ್ಲಿ ಪ್ರತಿಭಾನ್ವಿತ ಸಾಂಸ್ಕೃತಿಕ ತಂಡಗಳಿಗೆ ವೇದಿಕೆ ಕಲ್ಪಿಸಿದೆ ಎಂದರು.
ಎಲ್ಲ ಸಮುದಾಯದಗಳು ಒಗ್ಗಟ್ಟು ಪ್ರದರ್ಶನ ಮೂಲಕ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವತ್ತ ಗಮನ ಹರಿಸಬೇಕು. ನಗರದಲ್ಲಿ ಕೋಟ್ಯಾಂತರ ರೂ.ಸಂಪಾದಿಸುವ ಶ್ರೀಮಂತರು ತಮ್ಮ ತಮ್ಮ ಸಮಾಜದಲ್ಲಿ ಕಾರ್ಯಕ್ರಮ ರೂಪಿಸಲು ಉದಾತ್ತವಾಗಿ ನೆರವು ನೀಡಿ, ಸಾಂಸ್ಕೃತಿಕ ಮೆರಗು ಎತ್ತಿ ಹಿಡಿಯಬೇಕಾಗಿದೆ. ಕರ್ನಾಟಕ ಸಂಘದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಪ್ರೇರಣೆಯಿಂದ ಈ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆ ನಿರ್ವಹಿಸಬೇಕೆಂಬ ಉದ್ದೇಶದಿಂದ ಸಮಾಜವೂ ಈ ಕಾರ್ಯಕ್ರಮ ನಡೆಸುತ್ತಿದೆಂದು ಹೇಳಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸಮಾಜಗಳು ಕಾರ್ಯಕ್ರಮ ಆಯೋಜನೆಗೆ ಮುಂದಾಗಲಿ ಎಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಅಭಿನವ ರಾಚೋಟಿ ಸೋಮವಾರಪೇಟೆ ಮಹಾಸ್ವಾಮಿಗಳು ನೆರೆವೇರಿಸಿದರು. ನಂತರ ಮಾತನಾಡಿ, ಎ.ಪಾಪಾರೆಡ್ಡಿ ಮತ್ತು ಬೆಲ್ಲಂ ನರಸರೆಡ್ಡಿ ಇವರಿಬ್ಬರು ಮುನ್ನೂರು ಕಾಪು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜ ಬಲಿಷ್ಠ ಸಮಾಜವನ್ನಾಗಿ ಗುರುತಿಸಿಕೊಂಡಿದೆ.ಮುನ್ನೂರು ಕಾಪು ಸಮಾಜದಿಂದ ಆಯೋಜಿಸುವ ಮುಂಗಾರು ಹಬ್ಬ ನಂತರ ನವರಾತ್ರಿ ಉತ್ಸವ ಅತ್ಯಂತ ವೈಭವಕರಣದಿಂದ ಆಯೋಜಿಸುವ ಮೂಲಕ ಇಡೀ ರಾಜ್ಯವೇ ಜಿಲ್ಲೆಯನ್ನು ಗುರುತಿಸುವಂತೆ ಮಾಡಿದ ಕೀರ್ತಿ ಮುನ್ನೂರು ಕಾಪು ಸಮಾಜಕ್ಕೆ ಸಲ್ಲುತ್ತದೆ ಎಂದರು.ಸಮಾಜದಲ್ಲಿ ಹುಟ್ಟಿ ಸಮಾಜಕ್ಕೆ ಏನಾದರು ಕೊಡುಗೆ ಕೊಟ್ಟಾಗ ಮಾತ್ರ ನಮ್ಮ ಜನ್ಮ ಸಾರ್ಥಕ ಎಂದರು. 28 ಜನ್ಮದ ಪುಣ್ಯ ಫಲ ಗೊತ್ತಿಲ್ಲ ಆದರೆ ಇಂದು ಎ. ಪಾಪಾರೆಡ್ಡಿ ಮತ್ತು ಬೆಲ್ಲಂ ನರಸರೆಡ್ಡಿ ಅವರ ನೇತೃತ್ವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಮುನ್ನೂರು ಕಾಪು ಸಮಾಜ ಇತರೆ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನಸು ಮಲಿನ ಎಂದು ಸ್ವಾಮಿಗಳು ಆಶೀರ್ವಚನ ಮಾಡಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಮಕೂರು ರಾತಿಕ ಸಾಗರ್ ಮತ್ತು ಎಸ್ ಎಸ್ ಆರ್ ಜಿ, ಎಸ್ ಆರ್ ಕೆ ಬಿ ಇಡ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚಿಗೆಗೆ ಪಾತ್ರರಾದರು. ಧಾರ್ಮಿಕ ಮತ್ತು ಗ್ರಾಮೀಣ ಸೊಗಡಿನ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದ ದಿವ್ಯಾ ಸನ್ನಿದ್ಯಾವನ್ನು ಅಭಿನವ ರಾಚೋಟಿ
ಸೋಮವಾರಪೇಟೆ ಸ್ವಾಮಿಗಳು ವಹಿಸಿದ್ದರು.
ಚನ್ನಬಸವ ಹಿರೇಮಠ ಅವರು ಉಪನ್ಯಾಸ ಕಾರ್ಯಕ್ರಮ ನಡೆಸಿದರು.
ನಿನ್ನೆ ಮಳೆಯ ಪರಿಣಾಮ ರದ್ದುಗೊಂಡಿಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿನ ಕಾರ್ಯಕ್ರಮದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಬೆಲ್ಲಂ ನರಸರೆಡ್ಡಿ,
ಸಾವಿತ್ರಿ ಪುರುಷೋತ್ತಮ್, ಜಗನಾಥ್ ಕುಲಕರ್ಣಿ,
ರಾಳ್ಳ ತಿಮ್ಮಾರೆಡ್ಡಿ, ಕೋಶರೆಡ್ಡಿ, ಕುಕ್ಕಲ್ ನರಸಿಂಹಲು, ವೈ ಗೋಪಾಲರೆಡ್ಡಿ, ಯು. ಲಿಂಗರೆಡ್ಡಿ, ನಂದಕಟ್ಟುಮನಿ, ಆರ್ ಕೆ ಅಮರೇಶ, ಶ್ರೀಕಾಂತ್ ವಕೀಲರು,ಜಗದೀಶ್ ಗುಪ್ತ, ಉದಯಕುಮಾರ ಯಾದವ್, ಅರವಿ ನಾಗನಗೌಡ, ಪಿ. ಶ್ರೀನಿವಾಸ್ ರೆಡ್ಡಿ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.

Megha News