Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಗ್ರಾಮೀಣ ಭಾಗದ ಜನರ ಕುಂದು-ಕೊರತೆಗಳನ್ನು‌ ಆಲಿಸಿದ ಸಚಿವ

ಗ್ರಾಮೀಣ ಭಾಗದ ಜನರ ಕುಂದು-ಕೊರತೆಗಳನ್ನು‌ ಆಲಿಸಿದ ಸಚಿವ

ರಾಯಚೂರು: ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮೀಣ ಭಾಗದ ಜನರ ಕುಂದು-ಕೊರತೆಗಳನ್ನು‌ ಸಚಿವ ಎನ್.ಎಸ್.ಬೋಸರಾಜು ತಮ್ಮ ನಿವಾಸದಲ್ಲಿ ಆಲಿಸಿದರು. ಸ್ಥಳದಲ್ಲಿಯೇ ಪರಿಹರಿಸಬಹುದಾದ ಸಣ್ಣ-ಪುಟ್ಟ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಸಚಿವರ ಮನೆಗೆ ಸಾರ್ವಜನಿಕರು ಭೇಟಿ ನೀಡಿ ವಿವಿಧ ಸಮಸ್ಯೆಗಳನ್ನು ವಿವರಿಸಿದರು. ಕೆಲವರು ಅಹವಾಲು ಸಲ್ಲಿಸಿದರು.

ಸಚಿವರು ಸಮಸ್ಯೆಗಳಿಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಕಚೇರಿಯಲ್ಲಿ ಬಗೆಹರಿಸಬಹುದಾದ ಸಣ್ಣ-ಪುಟ್ಟ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು. ಸಾರ್ವಜನಿಕರು ಕಚೇರಿಗೆ ಅಲೆಯದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ ಗುಡದಿನ್ನಿ, ಬಸವರಾಜ, ರಾಜಶೇಖರ ಇದ್ದರು.

Megha News