Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಮಂತ್ರಾಲಯದಲ್ಲಿ ವೈಭವದಿಂದ ನಡೆದ ತುಂಗಾರತಿ

ಮಂತ್ರಾಲಯದಲ್ಲಿ ವೈಭವದಿಂದ ನಡೆದ ತುಂಗಾರತಿ

ರಾಯಚೂರು. ಕಾರ್ತಿಕ ಮಾಸದ ನಿಮಿತ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ತುಂಗಭದ್ರಾ ನದಿಯಲ್ಲಿ ತುಂಗಾರತಿ ಅತ್ಯಂತ ವೈಭವದಿಂದ ನೆರವೇರಿಸಿದರು.
ಶ್ರೀ  ಪ್ರಹ್ಲಾದ ರಾಜರ ಮೂರ್ತಿಯ ಮೆರವಣಿಗೆ ತುಂಗಭದ್ರ ನದಿ ತೀರದವರೆಗೂ ವಿಜೃಂಭಣೆ ಯಿಂದ ನೆರವೇರಿಸಲಾಯಿತು.
ಪ್ರತಿ ವರ್ಷವೂ ತುಂಗಭದ್ರಾ ನದಿಯಲ್ಲಿ ತುಂಗಾ ರತಿ ಮಾಡುವ ಮೂಲಕ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮಂತ್ರಾ ಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಅನುಗ್ರಹ ಸಂದೇಶ ನೀಡಿದರು.
ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯು ತ್ತಿದ್ದು, ತುಂಗಾರತಿಯಿಂದ ಬೆಳಕಿನತ್ತ ಸಾಗುತ್ತೇವೆ ಎಂದರು.
ತುಂಗಾರತಿ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾದರು.

Megha News