Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಹನುಮಾ ಮಾಲಾಧಾರಿಗಳಿಗೆ ಬುಲೇರೋ ಡಿಕ್ಕಿ, 3 ಜನರು ಸಾವು, ಇಬ್ಬರಿಗೆ ಗಂಭೀರ ಗಾಯ

ಹನುಮಾ ಮಾಲಾಧಾರಿಗಳಿಗೆ ಬುಲೇರೋ ಡಿಕ್ಕಿ, 3 ಜನರು ಸಾವು, ಇಬ್ಬರಿಗೆ ಗಂಭೀರ ಗಾಯ

ರಾಯಚೂರು. ನದಿಗೆ ನೀರು ತರಲು ಪಾದ ಯಾತ್ರೆ ಹೊರಟಿದ್ದ ಹನುಮ ಮಾಲಾಧಾರಿಗಳಿಗೆ ಹಿಂಬದಿಯಿಂದ ಬುಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ 3 ಜನರು ಸಾವನಪ್ಪಿ ದರೆ ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ತಾಲೂಕಿನ ಶಕ್ತಿ ನಗರದ ಯಾದವ್ ಕ್ರಾಸ್ ಬಳಿ ನಡೆದಿದೆ.

ಮೃತರು ಅಯ್ಯನಗೌಡ (28) ಮಹೇಶ(22) ಉದಯ ಕುಮಾರ(28) ವರ್ಷ, ಇವರು ಹೆಗಸನಹಳ್ಳಿ ಗ್ರಾಮದವರೆಂದು ಗುರುತಿಸಲಾಗಿದೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನದಿಯಿಂದ ನೀರು ತರಲು ಹೆಗಸನಹಳ್ಳಿ ಗ್ರಾಮ ದಿಂದ 13 ಜನರು ಹನುಮ ಮೂಲಾಧಾರಿಗಳು ಕೃಷ್ಣಾ ನದಿಗೆ ನೀರು ತರಲು ಪಾದಯಾತ್ರೆ ಮೂಲಕ ತೆರಳಿದ್ದರು.
ದೇವಸೂಗುರು ಸಮೀಪ ಕೋಳಿ ಸಾಗಿಸುತ್ತಿದ್ದ ಬುಲೇರೋ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದೆ, ಪರಿಣಾಮ 3 ಜನರು ಸ್ಥಳದಲ್ಲಿಯೇ ಮೃತಪ ಟ್ಟಿದ್ದು, ಇಬ್ಬರಿಗೆ ಗಂಬೀರವಾಗಿ ಗಾಯ ಗೊಂಡಿದ್ದಾನೆ.
ಸ್ಥಳಕ್ಕೆ ಶಕ್ತಿನಗರ ಠಾಣೆಯ ಪೋಲಿಸರು ತೆರಳಿ ಮೃತರನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ‌. ಇನ್ನು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಈ ಕುರಿತು ಶಕ್ತಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

Megha News