Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National NewsState News

ಕೇಂದ್ರ ಮಂತ್ರಿ ಕುಮಾರಸ್ವಾಮಿಗೆ ಬಜೆಟ್ ನಲ್ಲಿ ರಾಯಚೂರಿಗರ ಏಮ್ಸ್ ಘೋಷಿಸಲು ಒತ್ತಾಯಿಸಿ ಮನವಿ

ಕೇಂದ್ರ ಮಂತ್ರಿ ಕುಮಾರಸ್ವಾಮಿಗೆ ಬಜೆಟ್ ನಲ್ಲಿ ರಾಯಚೂರಿಗರ ಏಮ್ಸ್ ಘೋಷಿಸಲು ಒತ್ತಾಯಿಸಿ ಮನವಿ

Tದೆಹಲಿ. ಕರ್ನಾಟಕ ಭವನದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರಿಗೆ ರಾಯಚೂರಿಗೆ ಏಮ್ಸ್ (AIIMS) ಘೋಷಿಸಲು ಮುಂಬರುವ ಜು. 23 ನ ಬಜೇಟ್‌ನಲ್ಲಿ ಸೇರಿಸುವ ಪ್ರಯತ್ನ ಮಾಡಬೇಕೆಂದು ಜಿಲ್ಲಾ ಏಮ್ಸ್ ಹೋರಾಟ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ ಏಮ್ಸ್ ಹೋರಾಟ ಬಗ್ಗೆ ಗೊತ್ತಿದೆ, ಏಮ್ಸ್ ಕುರಿತು ಮಾತುಕತೆ ನಡಿತಾ ಇದೆ, ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು‌. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಡಾ‌ ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್, ದೇಹಲಿ ಕನ್ನಡ ಸಂಘದ ವೈಜನಾಥ ಬಿರಾದರ, ವಿನಯ್ ಕುಮಾರ್ ಅಮರೇಗೌಡ, ಥಾಮಸ್ ಸೇರಿದಂತೆ ಅನೇಕರು ಇದ್ದರು.

Megha News