Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ರೈಲ್ವೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಎಐಡಿವೈಒ ಅಗ್ರಹಿಸಿ ಸಹಿ ಸಂಗ್ರಹ ಚಳುವಳಿ

ರೈಲ್ವೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಎಐಡಿವೈಒ ಅಗ್ರಹಿಸಿ ಸಹಿ ಸಂಗ್ರಹ ಚಳುವಳಿ

ರಾಯಚೂರು. ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು, ರೈಲುಗಳಲ್ಲಿ ಕಾಯ್ದಿರಿಸಿದ(ಯು.ಆರ್) ಮತ್ತು ಸ್ಲೀಪರ್ ಕೋಚ್(ಆರ್)ಗಳನ್ನು ಹೆಚ್ಚಿಸುವಂತೆ, ವಲಸೆ ಕಾರ್ಮಿಕರಿಗಾಗಿ ಸಂಪೂರ್ಣ ಕಾಯ್ದಿರಿಸಿ ದ ರೈಲುಗಳನ್ನು ಓಡಿಸಬೇಕು, ಹಿರಿಯ ನಾಗರಿ ಕರ ರಿಯಾಯಿತಿ ಸೌಲಭ್ಯವನ್ನು ಮರು ಸ್ಥಾಪಿಸು ವಂತೆ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾ ರಕ್ಕಾಗಿ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆ ಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ನಗರದ ಜವಾಹರ್ ನಗರ ಉದ್ಯಾನವನ ಮತ್ತು ಎಲ್.ವಿ. ಡಿ ಕಾಲೇಜ್ ಹತ್ತಿರ ವಾಯುವಿಹಾರ ಮಾಡುವ ಸಾರ್ವಜನಿಕ ರಿಂದ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ಯಾಮ ಸುಂದರ ಅವರು ಚಾಲನೆ ನೀಡಿ, ಮಾತನಾಡಿ ದರು, ಕೋವಿಡ್ ಸಂದರ್ಭದಲ್ಲಿ ರೈಲ್ವೆ ಇಲಾಖೆ ಯು ಎಲ್ಲಾ ರಿಯಾಯಿತಿ ಸೌಲಭ್ಯಗಳನ್ನು ರದ್ದುಪಡಿಸಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದೆ. ಹಿರಿಯ ನಾಗರಿಕರ ರಿಯಾಯಿತಿ ಸೌಲಭ್ಯವನ್ನು ಮರು ಜಾರಿ ಮಾಡು ವಂತೆ ಒತ್ತಾಯಿಸಿದರು.
ಎಐಡಿವೈಒ ಯುವಜನ ಸಂಘಟನೆಯ ಜಿಲ್ಲಾಧ್ಯ ಕ್ಷರಾದ ಚನ್ನಬಸವ ಜಾನೇಕಲ್ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಒಟ್ಟಾರೆಯಾಗಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ನಲ್ಲಿ 2,74, 000 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
2019 ರಿಂದ 2023ರವರೆಗೆ ಒಟ್ಟು 162 ರೈಲು ಅಪಘಾತಗಳ ಸಂಭವಿಸಿದ್ದು, ಈ ಅಪಘಾತಗ ಳಲ್ಲಿ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಪ್ರಯಾಣಿಕರ ಸುರ ಕ್ಷತೆಗಾಗಿ ರೈಲ್ವೆ ಇಲಾಖೆಯು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಮರೇಶ್ ಆದೋನಿ, ಯಲ್ಲಪ್ಪ, ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್, ಯಲ್ಲಪ್ಪ, ಸಂದೀಪ್, ಮೌನೇಶ್, ಬಸವರಾಜ್ ಮುಂತಾದವರು ಭಾಗವಹಿಸಿದ್ದರು.

Megha News