Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು, ಮೃತರ ಕುಟುಂಬಕ್ಕೆ ಸಾಂತ್ವನ ವೈಯಕ್ತಿಕ ಸಹಾಯ,ಸರ್ಕಾರ ಉದ್ಯೋಗ ನೀಡಲು ಒತ್ತಾಯ

ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು, ಮೃತರ ಕುಟುಂಬಕ್ಕೆ ಸಾಂತ್ವನ ವೈಯಕ್ತಿಕ ಸಹಾಯ,ಸರ್ಕಾರ ಉದ್ಯೋಗ ನೀಡಲು ಒತ್ತಾಯ

ರಾಯಚೂರು. ರಸ್ತೆ ಅಪಘಾತದಲ್ಲಿ ಮೃತಪಟ್ಟ ರುವ ವಿದ್ಯಾರ್ಥಿಗಳ ಕುಟುಂಬದ ಮನೆಗಳಿಗೆ ಬೇಟಿ ನೀಡಿದ ಶಾಸಕ ಶಿವರಾಜ ಪಾಟೀಲ್ ಸಾಂತ್ವನ ಹೇಳಿ ವೈಯಕ್ತಿಕ ಸಹಾಯಧನ ಮಾಡಿದರು.

ಮಾನವಿ ತಾಲೂಕಿನ ಕಪಗಲ್ ಬಳಿ ಶಾಲಾ ವಾಹನ ಮತ್ತು ಸಾರಿಗೆ ಬಸ್ ನಡುವೆ ರಸ್ತೆ ಅಪಘಾತದಲ್ಲಿ ಕುರ್ಡಿ ಗ್ರಾಮದ ಇಬ್ಬರು ಬಾಲ ಕರು ಮೃತಪಟ್ಟಿದ್ದು, ಅವರ ಮನೆಗೆ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿ, ರಸ್ತೆ ಅಪಘಾತದಲ್ಲಿ ಸರ್ಕಾರ ಮೃತರ ಕುಟುಂಬಕ್ಕೆ ಸಾಂತ್ವನ ನೀಡಿ ಪರಿಹಾರವೂ ನೀಡಿದೆ ಜೊತೆಗೆ ಎರಡು ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು ಎಂದರು.
ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದು ಸಂಚಾ ರಕ್ಕೆ ತೊಂದರೆ ಉಂಟಾಗುತ್ತಿದೆ, ಹಾಗೂ ಕೆಆರ್‌ ಡಿಸಿಎಲ್ ಇಲಾಖೆಯಿಂದಲೂ ಕೆಲವು ಲೋಪ ದೋಷಗಳಾಗಿವೆ, ಕಾಮಗಾರಿ ಮಾಡುವಾಗ ಲೇವಲಿಂಗ್ ಮತ್ತು ಸೈಡ್ ವೀಲಿಂಗ್ ಕಾಮಗಾರಿ ಯಲ್ಲಿ ಲೋಪದೋಷಗಳಾಗಿವೆ, ಕಾಮಗಾರಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಜೀವಕ್ಕಿಂತ ಬೆಲೆ ಬಾಳುವುದು ಬೇರೊಂದಿಲ್ಲ, ಯಾವುದೇ ಕಾಮಗಾರಿ ಮಾಡುವಾಗ ಪರಿಪೂರ್ಣವಾಗಿ ಮಾಡಬೇಕು, ಅನೇಕ ಲೋಪದೋಷಗಳಿಂದ ಇಂತಹ ಅನಾವುತಕ್ಕೆ ಕಾರಣವಾಗುತ್ತಿದೆ, ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಗುಣಮಟ್ಟದ ಕಾಮ ಗಾರಿ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಗ್ರಾಮಸ್ಥರು ಇದ್ದರು.

Megha News