ಯಾದಗಿರಿ,ನ.೧೬- ರೈತರಿಗೆ ಕೇವಲ ಕೃಷಿಗೆ ಸೀಮಿತವಾಗದೆ ರೈತರು ಜೇನು ಸಾಗಾಣಿಕೆ,ಹೈನುಗಾರಿಕೆ, ಮೀನು ಸಾಗಾಣಿಕೆ, ಕೋಳಿ ಸಾಗಾಣಿಕೆ ಬಗ್ಗೆ ಅವರಿಗೆ ಸಲಹೆಗಳನ್ನು ನೀಡಬೇಕು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಿಗುವಂತಹ ಸಾಲ ಸೌಲಭ್ಯಗಳು ಯೋಜನೆಗಳ ಕುರಿತು ಸರಿಯಾದ ಮಾಹಿತಿ ನೀಡಿ ಎಂದು ಸಂಸದ ಜಿ.ಕುಮಾರನಾಯಕ ಸೂಚಿಸಿದರು.
ಅವರಿಂದು ಜಿಲ್ಲಾಮಟ್ಟದ ವಿವಿಧ ಇಲಾಖಾಧಿಕಾರಿಗಳೊಂದಿಗೆವಸಭೆ ನಡೆಸಿ ಮಾಹಿತಿ ಪಡೆದರು. ಆರ್ಥಿಕತೆಯನ್ನು ಹೆಚ್ಚಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ರೈತರ ಆರ್ಥಿಕತೆ ಹಾಗೂ ಬೆಳವಣಿಗೆಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾತನಾಡಿದರು ಈ ವೇಳೆಯಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ಸೇರಿದಂತೆ ಜಿಲ್ಲೆ ಅನೇಕ ಅಧಿಕಾರಿಗಳು ಹಾಜರಿದ್ದರು.
Megha News > Local News > ಯಾದಗಿರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂಸದ ಸಭೆ: ಉಪ ಕೃಷಿ ಉತ್ತೇಜಿಸಲು ಕುಮಾರನಾಯಕ ಸೂಚನೆ
ಯಾದಗಿರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂಸದ ಸಭೆ: ಉಪ ಕೃಷಿ ಉತ್ತೇಜಿಸಲು ಕುಮಾರನಾಯಕ ಸೂಚನೆ
Tayappa - Raichur16/11/2024
posted on

Leave a reply