Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

2ನೇ ಮದುವೆಗೆ ಅಡ್ಡಿಪಡಿದ ಮಗುವನ್ನು ಸಾಯಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

2ನೇ ಮದುವೆಗೆ ಅಡ್ಡಿಪಡಿದ ಮಗುವನ್ನು ಸಾಯಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಲಿಂಗಸುಗೂರು. 2ನೇ ಮದುವೆಗೆ ಮಗು ಅಡ್ಡಿ ಯಾಗುತ್ತೆ ಎಂದು ಭಾವಿಸಿ ಕೊಂದು ಬಳಿಕ ಕಲ್ಲಿನ‌ ಮುಚ್ಚಿಟ್ಟಿರುವ ದಾರುಣ ಘಟನೆಗೆ ಬಿಗ ಟ್ವಿಸ್ಟ್ ದೊರೆತಿದೆ.

ತಾಲೂಕಿನ ಮುದ್ಗಲ್ ಸಮೀಪದ ಕನಸಾವಿ ಗ್ರಾಮದ ನಿವಾಸಿ ಮಹಾಂತೇಶ
14 ತಿಂಗಳು ಮಗು ಅಭಿನವನನ್ನು ತಂದೆ ಮಹಾಂತೇಶ ಕೊಂದು ಹಾಕಿ ಮುಚ್ಚಿಟ್ಟಿದ್ದಾನೆ.
ಮರು ಮದುವೆ ಆಗಲು ಆಸೆಪಟ್ಟಿದ್ದ ಮಹಾಂ ತೇಶ್‌ ಪತ್ನಿಗೆ ಪರ ಪುರುಷನೊಂದಿಗೆ ಅನೈತಿಕ‌ ಸಂಬಂಧ ಹೊಂದಿದ್ದಳು ಎಂಬ ಸಾಬೂಬು ಉತ್ತರ ನೀಡಿದ್ದ, ಮಹಾಂತೇಶ ಮತ್ತೊಂದು ಮದುವೆಯಾಗುವ ತಯಾರಿ ನಡೆಸಿದ್ದ, ಈ ಮದುವೆ ತನ್ನ ಮಗು ಅಡ್ಡಿಯಾಗುತ್ತದೆ ಎಂದು ಕೊಲೆ ಮಾಡಿ ಕಲ್ಲಿನ ಸಂದಿಯಲ್ಲಿ ಮುಚ್ಚಿಟ್ಟದ್ದಾನೆ.
ಮಗು ಕಾಣೆಯಾದ ಕುರಿತು ನಾಪತ್ತೆ ಪ್ರಕರಣ ವನ್ನು ದಾಖಲಿಸಲಾಗಿತ್ತು, ಪ್ರಕರಣ ಬೆನ್ನತ್ತಿದ ಪೋಲಿಸರು ತಂದೆ ಮಹಾಂತೇಶ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ, ಬಳಿಕ ಮಹಾಂತೇಶ ತಪ್ಪು ಒಪ್ಪಿಕೊಂಡಿದ್ದಾನೆ. ಬಳಿಕ ಮತ್ತೊಂದು ಆಘಾತಕಾರಿ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ.
ಸೆ. 3 ರಾತ್ರಿ ಪತ್ನಿ ಭೀಮಮ್ಮಳ ಊರು ಕನಸಾ ವಿಗೆ ಆರೋಪಿ ತಂದೆ ಮಹಾಂತೇಶ್ ಬಾಗಲ ಕೋಟೆಯಿಂದ ಬಂದಿದ್ದ ಪತ್ನಿ ಜೊತೆ ಜಗಳವಾಡಿ 14 ತಿಂಗಳ ಹಸುಗೂಸು ಅಭಿನವನನ್ನು ಆರೋಪಿ ಮಹಾಂತೇಶ್ ತನ್ನ ಜೊತೆಗೆ ಕರೆದೊಯ್ದಿದ್ದ. ಮಾರನೇ ದಿನ ಮಗುವಿನ ಸುಳಿವು ಸಿಗದೇ ಇದ್ದಾಗ ಮುದಗಲ್ ಪೊಲೀಸರಿಗೆ ದೂರು ನಿಡಲಾಗಿತ್ತು. ಬಳಿಕ ಮುದಗಲ್ ಪೊಲೀಸರು ಆರೋಪಿ ತಂದೆ ಮಹಾಂತೇಶನ ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಹತ್ಯೆಗೆ ಎರಡು ಮೂರು ಬಾರಿ ಪ್ರಯತ್ನಿಸಿದ್ದೆ. ಆಗ ಆಕೆಯ ಪಕ್ಕದಲ್ಲಿ ಮಲಗಿದ್ದ 14 ತಿಂಗಳ ಮಗ ಅಡ್ಡಿಪಡಿಸುತ್ತಿದ್ದ ಎಂದು ಪತ್ನಿಯ ಕೊಲೆ ಮಾಡಲಾಗದ ಹಿನ್ನೆಲೆ ಮೊದಲು ಮಗನನ್ನು ಕೊಂದು, ನಂತರ ಪತ್ನಿಯನ್ನೂ ಕೊಲ್ಲಲು ಮುಂದಾಗಿದ್ದೆ. ಮಗುವನ್ನು ಕೊಂದು ಕನಸಾವಿ ಗ್ರಾಮದ ಹೊರಭಾಗದಲ್ಲಿ ಹೂತಿಟ್ಟಿದ್ದೆ ಎಂದು ಆರೋಪಿ ತಂದೆ ಮಹಾಂತೇಶ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

Megha News