Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಈಶ್ವರ ಲಿಂಗ ಮತ್ತು ಬಸವಣ್ಣ ಮೂರ್ತಿಗಳು ಭಗ್ನಗೊಳಿಸಿದ ದುಷ್ಕರ್ಮಿಗಳು

ಈಶ್ವರ ಲಿಂಗ ಮತ್ತು ಬಸವಣ್ಣ ಮೂರ್ತಿಗಳು ಭಗ್ನಗೊಳಿಸಿದ ದುಷ್ಕರ್ಮಿಗಳು

ರಾಯಚೂರು.ಬಿಲ್ಲಮರಾಜನ ಬೆಟ್ಟದ ಕೆಳ ಭಾಗದ ಗುರುಲಿಂಗೇಶ್ವರ ಕರ್ತೃ ಗದ್ದುಗೆ ಮೇಲಿನ ಈಶ್ವರ ಲಿಂಗ ಮತ್ತು ಬಸವಣ್ಣ ಮೂರ್ತಿಗಳು ಭಗ್ನಗೊಳಿಸಿರುವ ಘಟನೆ ಜಿಲ್ಲೆಯ ಲಿಂಗಸು ಗೂರು ತಾಲ್ಲೂಕಿನ ಕರಡಕಲ್ಲ ಗ್ರಾಮದಲ್ಲಿ ನಡೆದಿದೆ.

ಈಶ್ವರ ಮೂರ್ತಿಯ ಮೇಲ್ಭಾಗದ ಲಿಂಗ ಹಾಗೂ ಬಸವಣ್ಣ ಮೂರ್ತಿಯ ಕುತ್ತಿಗೆ ಭಾಗವನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗಿದ್ದಾರೆ.
ಗದ್ದುಗೆ ಹಿಂಭಾಗದಲ್ಲಿ ಆಳವಾದ ಗುಂಡಿ ಅಗೆಯಲಾಗಿದೆ ಎಂದು ತಿಳಿದು ಬಂದಿದೆ.
ಯಾದವ ವಂಶದ ಬಿಲ್ಲಮರಾಜ ಆಳಿದ ಕೋಟೆ ಕೊತ್ತಲು, ದೇವಸ್ಥಾನಗಳು, ಮೂರು ಸುತ್ತಿನ ಕೋಟೆ ಭಾಗಶಃ ನಿಧಿಗಳ್ಳರ ಹಾವಳಿಗೆ ನೆಲಸಮಗೊಳ್ಳುತ್ತ ಬಂದಿವೆ. ಕುಣಿಸೋಮೇಶ್ವರ ದೇವಸ್ಥಾನದ ಮೂರ್ತಿ, ಶಿಲಾಶಾಸನ ಸ್ಥಳಗಳಲ್ಲಿ ಕೂಡ ಹಲವು ಬಾರಿ ನಿಧಿಗಳ್ಳರ ಕೈಚಳಕ ನಡೆದಿರುವ ಸಂಗತಿಗಳು ಬೆಳಕಿಗೆ ಬಂದಿವೆ.
ಹತ್ತು ಹಲವು ಘಟನೆಗಳು ಈ ಪ್ರದೇಶದಲ್ಲಿ ನಡೆದಿದ್ದರು ಕೂಡ ಶಿಲಾಶಾಸನ, ಮೂರ್ತಿಗಳು ಭಗ್ನಗೊಂಡಿರಲಿಲ್ಲ. ನಾಲ್ಕು ದಿನಗಳ ಹಿಂದೆಯಷ್ಟೆ ಜರುಗಿದ ಈ ಘಟನೆಯಲ್ಲಿ ಈಶ್ವರ, ಬಸವಣ್ಣ ಮೂರ್ತಿಗಳ ಭಗ್ನಗೊಳಿಸಿ ಅದರ ಪಳಿಯುಳಿಕೆ ತೆಗೆದುಕೊಂಡು ಹೋಗಿದ್ದಾರೆ.
‘ಐತಿಹಾಸಿಕ ಪ್ರಸಿದ್ಧ ಬಿಮ್ಮರಾಜನ ಬೆಟ್ಟದಲ್ಲಿ ನಡೆಯುತ್ತಿರುವ ನಿಧಿಗಳ್ಳರ ಕೈಚಳಕ ಹಾಗೂ ದುಷ್ಕರ್ಮಿಗಳ ಗುಂಪು ದೇವರ ಮೂರ್ತಿಗಳ ಭಗ್ನಗೊಳಿಸಿರುವ ಕುರಿತು ಲಿಂಗಸುಗೂರು ಪೊಲೀಸ್‍ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News