Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಜಾಲಿಬೆಂಚಿ ದ್ಯಾವಮ್ಮ ದೇವಿ ನೂತನ ದೇವಸ್ಥಾನ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಜಾಲಿಬೆಂಚಿ ದ್ಯಾವಮ್ಮ ದೇವಿ ನೂತನ ದೇವಸ್ಥಾನ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ರಾಯಚೂರು. ತಾಲೂಕಿನ ಜಾಲಿಬೆಂಚಿ ಗ್ರಾಮದ ದ್ಯಾವಮ್ಮ ದೇವಿಯ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಭಾಗಿಯಾಗಿ ದೇವಿಯ ಆರ್ಶೀವಾದ ಪಡೆದರು.

ಈ ವೇಳೆ ಕಾರ್ಯಕ್ರಮದ ದಿವ್ಯ ಸಾನಿಧ್ಯವ ಹಿಸಿದ್ದ ಸೋಮವಾರಪೇಟೆ ಹಿರೇಮಠದ ಷ.ಬ್ರ. ಶ್ರೀ ಅಭಿನವ ರಾಚೋಟಿ ವೀರ ಶಿವಾ ಚಾರ್ಯ ಮಹಾಸ್ವಾಮಿಗಳು ಹಾಗೂ ಮಂಗಳ ವಾರಪೇಟೆ ಹಿರೇಮಠದ ಷ.ಬ್ರ. ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆರ್ಶೀವಾದ ಪಡೆದರು.
ಈ ವೇಳೆ ಮಾತನಾಡಿ ರಾಜ್ಯದಲ್ಲಿ ಎದುರಾಗಿ ರುವ ಭೀಕರ ಬರಗಾಲವನ್ನು ದೂರಮಾಡಿ ಜನಸಾಮಾನ್ಯರ ಹಾಗೂ ರೈತರ ಮೊಗದಲ್ಲಿ ಮಂದಹಾಸ ಮೂಡವಂತೆ ಆಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯರಗೇರಾ ಮಾಜಿ ಜಿ.ಪಂ ಸದಸ್ಯರಾದ ಖಾಸೀಂ ನಾಯಕ್, ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಸಿದ್ಧನಗೌಡ ನೆಲಹಾಳ್ , ಮಲ್ಲಿಕಾರ್ಜುನಗೌಡ ಉಡಮಗಲ್ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Megha News