Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ನಗರಕ್ಕೆ 3 ದಿನಕ್ಕೊಂದು ಬಾರಿ ನೀರು ಬಿಡುವ ನಿರ್ಣಯ ಪೌರಾಯುಕ್ತರು ಹಿಂಪಡೆಯಿರಿ ಇಲ್ಲದಿದ್ದಲ್ಲಿ ನಗರಸಭೆ ಮುತ್ತಿಗೆ ಎಚ್ಚರಿಕೆ

ನಗರಕ್ಕೆ 3 ದಿನಕ್ಕೊಂದು ಬಾರಿ ನೀರು ಬಿಡುವ ನಿರ್ಣಯ ಪೌರಾಯುಕ್ತರು ಹಿಂಪಡೆಯಿರಿ ಇಲ್ಲದಿದ್ದಲ್ಲಿ ನಗರಸಭೆ ಮುತ್ತಿಗೆ ಎಚ್ಚರಿಕೆ

ರಾಯಚೂರು. ನಗರಕ್ಕೆ 3 ದಿನಕ್ಕೊಮ್ಮೆ ಕುಡಿ ಯುವ ನೀರು ಸರಬರಾಜು ಮಾಡಲು ಆದೇಶ ಮಾಡಿರುವ ನಗರಸಭೆ ಪೌರಾಯುಕ್ತರ ಕೂಡಲೇ ಹಿಂಪಡೆದುಕೊಂಡು ಸಮರ್ಪಕವಾಗಿ ನೀರು ಒದಗಿಸಿಕೊಡಬೇಕು ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನದಿಯಲ್ಲಿ ನೀರು ಇದ್ದು, ಹಾಗೂ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ನೀರಿದೆ ಕುಡಿಯುವುದಕ್ಕಾಗಿ ಬಳಕೆ ಮಾಡಿಕೊಳ್ಳಬೇಕು, ಆದರೆ ಪೌರಾಯುಕ್ತ ಗುರು ಸಿದ್ದಯ್ಯ ಹಿರೇಮಠ ಅವರು ಏಕಾಂಗಿ ನಿರ್ಣಯ ಮಾಡಿದ್ದಾರೆ. ಪರಿಶೀಲನೆ ಮಾಡದೇ ನಗರಸಭೆ ಸದಸ್ಯರ ಸಭೆ ಕರೆದು ತೀರ್ಮಾಣ ತೆಗೆದುಕೊ ಳ್ಳಬೇಕು, ಆದರೆ ಏಕಾಏಕಿಯಾಗಿ ತಿರ್ಮಾನ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಸಾಕಷ್ಟು ತೊಂದರೆಗಳಿಗೆ ಪೌರಾ ಯುಕ್ತ ಅವರು ವಾರ್ಡ್ ಗಳಲ್ಲಿ ಸುತ್ತಾಡಿಲ್ಲ, ನೀರು ಇಲ್ಲವೆಂದು ನಿರ್ಣಯ ತೆಗೆದುಕೊಂಡಿದ್ದು, ಸರಿಯಲ್ಲ, ಅವರಿಗೆ ಮಾಹಿತಿ ಇಲ್ಲ, ಮಾಹಿತಿ ಸರಿಯಾಗಿ ತಿಳಿದುಕೊಳ್ಳಬೇಕು, ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕು ಎಂದರು.
ಉಸ್ತುವಾರಿ ಸಚಿವರು ಗಣೇಕಲ್ ಜಲಾಶಯಕ್ಕೆ ನೀರು ತುಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ, ಆದರೆ ಇವರು ನೀರಿಲ್ಲವೆಂದು ನಗರಕ್ಕೆ 3 ದಿನ ಕ್ಕೊಂದು ಬಾರಿ ಬಿಡುವುದಾಗಿ ಹೇಳಿದ್ದು ಪರಿಶೀ ಲನೆ ಮಾಡಬೇಕು ಎಂದು ತಿಳಿಸಿದರು.
ರಾಂಪೂರ ಕೆರೆಯಲ್ಲಿ ನೀರು ಇರುವಷ್ಟು ಬಿಡಬೇಕು, ಕೆರೆಗೆ ನೀರು ತುಂಬಿಸುವ ಕೆಲಸ ಮಾಡಬೇಕು.
ಈ ಹಿಂದೆ ನಾನು ನಗರಸಭೆ ಅಧ್ಯಕ್ಷ ನಾಗಿದ್ದ ಸಂದರ್ಭದಲ್ಲಿ ಇಂತಹ ಪರಸ್ಥಿತಿ ಇರಲಿಲ್ಲ, ಈಗ ವ್ಯವಸ್ಥೆ ಹದಗೆಟ್ಟಿದೆ, ನಗರದಲ್ಲಿ ಸ್ವಚ್ಚತಾ ಮಾಡು ವಲ್ಲಿ ವಿಫಲವಾಗಿದೆ, ನಗರದಲ್ಲಿನ ಕಸವನ್ನು ನಗರದಲ್ಲಿಯೇ ಸುರಿಯುತ್ತಿದ್ದಾರೆ‌. ಕುಡಿಯುವ ನೀರು ಒದಗಿಸಿದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.

Megha News