Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಕೃಷ್ಣನದಿ ಸೇತುವೆ ದುರಸ್ತಿ ಹಿನ್ನೆಲೆ ಸಂಚಾರ ಬಂದ್‌ನ್ನು ಸಂಕ್ರಾಂತಿ ಹಬ್ಬ, ಮೈಲಾಪೂರ ಜಾತ್ರೆ ನಿಮಿತ್ತ, ಜ.17ರ ವರೆಗೆ ಮುಂದೂಡಿಕೆ

ಕೃಷ್ಣನದಿ ಸೇತುವೆ ದುರಸ್ತಿ ಹಿನ್ನೆಲೆ ಸಂಚಾರ ಬಂದ್‌ನ್ನು ಸಂಕ್ರಾಂತಿ ಹಬ್ಬ, ಮೈಲಾಪೂರ ಜಾತ್ರೆ ನಿಮಿತ್ತ, ಜ.17ರ ವರೆಗೆ ಮುಂದೂಡಿಕೆ

ರಾಯಚೂರು. ಕೃಷ್ಣನದಿಯ ಮೇಲ್ ಸೇತುವೆ ದುರಸ್ಥಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಲು ತಿಳಿದಿದ್ದು, ಸಂಕ್ರಾಂತಿ ಹಾಗೂ ಮೈಲಾಪೂರ ಮಲ್ಲಯ್ಯ ಜಾತ್ರೆ ನಿಮಿತ್ತ ಜ.17ರ ವರೆಗೆ ಸಂಚಾರಕ್ಕೆ ಅನುಕೂಲ ಮಾಡಿಕೊ ಡಲಾಗಿದೆ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಚಿಸಲಾಗಿದೆ ಎಂದು ಶಾಸಕ ಶಿವರಾಜ ಪಾಟೀಲ್ ಅವರು ತಿಳಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೃಷ್ಣನದಿ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಇದೇ ಜ.10 ರಿಂದ ರಸ್ತೆ ಸಂಚಾರ ಬಂದ್ ಮಾಡಲು ಸಭೆ ಮಾಡಿ ತಿಳಿಸಲಾಗಿತ್ತು.
ಕೃಷ್ಣ ನದಿ ಸೇತುವೆ ಬಂದ್ ನಿಂದಾಗಿ ಸಾರ್ವಜನಿಕರು ಈ ಬಗ್ಗೆ ಪರಿಶೀಲಿಸಲು ತಿಳಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರ ಜೊತೆ ಚರ್ಚಿಸಿ ಜ.14 ಸಂಕ್ರಾಂತಿ ಹಬ್ಬ ಇರುವುದರಿಂದ ಜನರು ಸ್ನಾನಕ್ಕಾಗಿ ಕೃಷ್ಣನದಿಗೆ ತೆರಳುತ್ತಾರೆ, ಜೊತೆಗೆ ಯಾದಗಿರಿ ಜಿಲ್ಲೆಯ ಮೈಲಾಪೂರ ಮಲ್ಲಯ್ಯ ಜಾತ್ರೆ ಇದ್ದು, ಸಾವಿರಾರು ಭಕ್ತರು ಕೃಷ್ಣ ನದಿ ಸೇತುವೆ ಮೇಲೆಯೇ ಹಾದು ಹೋಗಬೇಕಾಗಿದೆ,
ಈ ಹಿನ್ನೆಲೆಯಲ್ಲಿ ಜ.17 ರವರೆಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತಿಳಿದಿದ್ದು ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿ ದ್ದಾರೆ ಎಂದು ತಿಳಿಸಿದ್ದಾರೆ.

Megha News