Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಕುಡಿಯುವ ನೀರಿಗಾಗಿ ಗ್ರಾಪಂ ಕಚೇರಿ ಮುಂದೆ ಎತ್ತುಗಳು ಕಟ್ಟಿ ಹಾಕಿ ಪ್ರತಿಭಟನೆ

ಕುಡಿಯುವ ನೀರಿಗಾಗಿ ಗ್ರಾಪಂ ಕಚೇರಿ ಮುಂದೆ ಎತ್ತುಗಳು ಕಟ್ಟಿ ಹಾಕಿ ಪ್ರತಿಭಟನೆ

ಲಿಂಗಸುಗೂರು.ಕುಡಿಯುವ ನೀರಿಗಾಗಿ ಮನವಿ ಮಾಡಿದರೂ ನೀರು ಒದಗಿಸಲು ಮುಂದಾಗದೇ ನಿರ್ಲಕ್ಷ್ಯ ವಹಿಸಿದ ಗ್ರಾಮ ಪಂಚಾಯತಿ ಗೇಟಿಗೆ ಎತ್ತುಗಳನ್ನು ಕಟ್ಟಿ ಹಾಕಿ ಗ್ರಾಮ ಪಂಚಾಯತಿ ಸದಸ್ಯ ರುದ್ರಗೌಡ ಪ್ರತಿಭಟನೆ ನಡೆಸಿದರು.

ತಾಲೂಕಿನ ಮುದಗಲ್ ವ್ಯಾಪ್ತಿಯಲ್ಲಿ ಬರುವ ನಾಗಲಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ನೀರಿನ ಸೌಲಭ್ಯ ಒದಗಿಸಲು ಪರಿಹಾರದ ವ್ಯವಸ್ಥೆ ಮಾಡಿಕೊಡಿ ಎಂದು ಗ್ರಾಮ ಪಂಚಾಯತಿ ಪಿಡಿಒಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ.ಇದಕ್ಕೆ ಕಿವಿಗೊಡದ ಪಿಎಒ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ‌.
ಅನೇಕ ದಿನಗಳಿಂದ ಕುಡಿಯುವ ನೀರಿನ ಸಮ ಸ್ಯೆ ಇದ್ದು ಗ್ರಾಮದ ಜನರು ಗ್ರಾಪಂ ಸದಸ್ಯರಿಗೆ ಕೇಳಿದ್ದಾರೆ, ಈ ಬಗ್ಗೆ ಸದಸ್ಯ ರುದ್ರಗೌಡ ಅವರು ಸಾಕಷ್ಟು ಬಾರಿ ಪಿಡಿಒ ಗಮನಕ್ಕೆ ತಂದು ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ತಿಳಿಸಿದ್ದಾರೆ ನಿರ್ಲಕ್ಷ್ಯ ವಹಿಸಿದರಿಂದ ಸದಸ್ಯ ರುದ್ರಗೌಡ ಬೇಸತ್ತು ಎತ್ತುಗಳನ್ನು ಗ್ರಾಪಂ ಕಚೇರಿ ಒಳಗಿನ ಗೇಟಿಗೆ ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದರು.

Megha News