Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಸರ್ವಧರ್ಮ ಸಂಕೇತ ಹಜರತ್ ಬಡೇಸಾಬ್ ಉರುಸ್ ಅಂಗವಾಗಿ ಗಂಧದ ಮೆರವಣಿಗೆ

ಸರ್ವಧರ್ಮ ಸಂಕೇತ ಹಜರತ್ ಬಡೇಸಾಬ್ ಉರುಸ್ ಅಂಗವಾಗಿ ಗಂಧದ ಮೆರವಣಿಗೆ

ರಾಯಚೂರು: ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಸಂಕೇತ ಹಜರತ್ ಬಡೇಸಾಬ್ ಉರುಸ್ ಅಂಗವಾಗಿ ಗಂಧದ ಮೆರವಣಿಗೆ ನಡೆಯಿತು.

ಮೆರವಣಿಗೆಯು ದರ್ಗಾದ ಸಜ್ಜಾದೆ ಸೈಯದ್ ಹಪೀಜುಲ್ಲಾ ಖಾದ್ರಿ ಮನೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದರ್ಗಾ ತಲುಪಿತು.ಸೈಯದ್ ಫಜಲುಲ್ಲಾ ಫಾತೆಹಾ ನೆರವೇರಿಸಿದರು.

ನಾಡಿನ ಶಾಂತಿ ನೆಮ್ಮದಿಗೆ ಪ್ರಾರ್ಥನೆ ಮಾಡಿದರು. ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು. ಗಂಧದ ಮೆರವಣಿಗೆಯಲ್ಲಿ ಮಕ್ಕಳ ಹಾಗೂ ಯುವಕರ ಗ್ರಾಮೀಣ ಕೋಲಾಟ ಜನರ ಮನಸೆಳೆಯಿತು.

ದುರ್ಗಾ ಸಮಿತಿಯ ಅಧ್ಯಕ್ಷ ಮೆಹಬೂಬ್ ಪಟೇಲ್, ಕಾರ್ಯದರ್ಶಿ ಮಹಮ್ಮದ್ ನಿಜಾಮುದ್ದೀನ್, ಗ್ರಾಮದ ಮುಖಂಡರಾದ ಹರಿಶ್ಚಂದ್ರ ರೆಡ್ಡಿ, ಜನಾರ್ದನ ರೆಡ್ಡಿ, ವಿದ್ಯಾನಂದ ರೆಡ್ಡಿ, ಎನ್.ವೆಂಕಟರಾಮ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ರಾಕೇಶ್ ಗೌಡ, ವಿಷ್ಣುವರ್ಧನ ರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಫಾರೂಕ್, ಪಂಚಾಯಿತಿ ಸದಸ್ಯರಾದ ಎಂ.ನಾರಾಯಣ ಕೃಷ್ಣಜಿ, ಮಹಾದೇವ, ಫಕ್ರುದ್ದೀನ್ ಹಾಗೂ ಖಾಜಾ ಹುಸೇನ್ ಉಪಸ್ಥಿತರಿದ್ದರು

Megha News