Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಕೃಷ್ಣಾ ಬ್ರಿಡ್ಜ್ : ಲಾರಿ ಟೈಯರ್‍‍ಗಳಲ್ಲಿ ರಾಡ್ ಸಿಲುಕಿ ಐದು ಗಂಟೆಗಳವರೆಗೆ ಸಂಚಾರ ಬಂದ್

ಕೃಷ್ಣಾ ಬ್ರಿಡ್ಜ್ : ಲಾರಿ ಟೈಯರ್‍‍ಗಳಲ್ಲಿ ರಾಡ್ ಸಿಲುಕಿ ಐದು ಗಂಟೆಗಳವರೆಗೆ ಸಂಚಾರ ಬಂದ್

ರಾಯಚೂರು: ಕರ್ನಾಟಕ ತೆಲಂಗಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಕೃಷ್ಣನದಿ ಬ್ರಜ್ ನಲ್ಲಿ ಎರಡು ಟ್ಯಾಂಕರ್ ವಾಹನಗಳ ರಾಡ್ ಸಿಲುಕಿಕೊಂಡಿ ದ್ದರಿಂದ 5 ಗಂಟೆಗಳ ವರೆಗೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರುವ ಘಟನೆ ಇಂದು ಶಕ್ತಿನಗರದಲ್ಲಿ ನಡೆದಿದೆ.
ತಾಲೂಕಿನ ಶಕ್ತಿನಗರದ ಹತ್ತಿರದ ಕೃಷ್ಣಾನದಿಯ ಬ್ರಿಜ್ ಕಿರಿದಾಗಿದ್ದು, ಎರಡು ಟ್ಯಾಂಕರ್ ವಾಹನಗ ಳು ಮುಖಾಮುಖಿಯಾಗಿ ಬಂದಿದ್ದು, ಟ್ಯಾಂಕರ್ ‌ಗಳ ರಾಡ್ ಸಿಲಿಕೊಂಡಿದ್ದರಿಂದ ವಾಹನ ಮುಂದೆ ಹೋಗದಂತೆ ಆಗಿದ್ದರಿಂದ ಬೆಳಗಿನ ಜಾವ 4 ಗಂಟೆಯಿಂದ 9 ಗಂಟೆಯವರೆಗೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು, ಈ ರಸ್ತೆಯಲ್ಲಿ ಒಡಾಡುವ ವಾಹನಗಳು ಸುಮಾರು ಎರಡು ಕಡೆ 5 ಕಿ.ಮೀವರೆಗೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ, ಶಕ್ತಿನಗರದ ಪೊಲೀಸ್ ಠಾಣೆಗೆ ಸ್ಥಳಿಯರು ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿ ರಾಡ್ ಕಟ್ ಮಾಡಿಸಿದ್ದಾರೆ, ನಂತರ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ, ಟ್ಯಾಂಕರ್ ವಾಹನವನ್ನು ಶಕ್ತಿನಗರದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Megha News