ರಾಯಚೂರು, ಜೂನ್ 25-ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಏಮ್ಸ್ ಹೋರಾಟ ಸಮಿತಿಯ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಅವರಿಗೆ ಜೀವ ಬೆದರಿಕೆ ಒಡ್ಡಿರುವ ಕುರಿತು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಧ್ಯಕ್ಷ ವೀರನಗೌಡ ಬಿ. ಪಾಟೀಲ್ ಲೆಕ್ಕಿಹಾಳ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬುದುವಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸಚಿವರ ವಿರುದ್ದ ಮಾತನಾಡಿರುವ ಅಶೋಕ ಕುಮಾರ ಜೈನ್, ಬಸವರಾಜ ಕಳಸ, ಎಸ್. ಮಾರೆಪ್ಪ, ಶ್ರೀನಿವಾಸ ಮತ್ತು ಎಂ.ಆರ್. ಬೇರಿ ಹಾಗೂ ಇತರರ ವಿರುದ್ದ. ಸೆಕ್ಷನ್ 352,351(2)(3)R/w sec. 190 ಬಿ ಎನ್ ಎಸ್ ಅಡಿಯಲ್ಲಿ ದೂರು ದಾಖಿಸಲಾಗಿದೆದಾಖಿಸಲಾಗಿದೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ.