Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಒಗ್ಗರಣೆ ಮಿರ್ಚಿ ಕೊಡಲು ತಡವಾಗಿದ್ದಕ್ಕೆ ಹೋಟೆಲ್ ಮಾಲೀಕ ಮೇಲೆ ಬಿಸಿ ಎಣ್ಣೆ ಎರಚಿದ ಗ್ರಾಹಕ

ಒಗ್ಗರಣೆ ಮಿರ್ಚಿ ಕೊಡಲು ತಡವಾಗಿದ್ದಕ್ಕೆ ಹೋಟೆಲ್ ಮಾಲೀಕ ಮೇಲೆ ಬಿಸಿ ಎಣ್ಣೆ ಎರಚಿದ ಗ್ರಾಹಕ

ರಾಯಚೂರು. ಹೋಟೆಲ್‌ ‌ನಲ್ಲಿ ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದ ಗ್ರಾಹಕ ಭೀಮಾ ನಾಯಕ್ ಒಗ್ಗರಣೆ ಕೊಡಲು ತಡವಾಗಿದ್ದಕ್ಕೆ ಕೋಪಗೊಂಡು ಕಾಯಿಸಿದ ಎಣ್ಣೆಯನ್ನು ಹೋಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಎನ್ನುವವರ ಮುಖಕ್ಕೆ ಎರಚಿದ ಘಟನೆ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊಟೇಲ್ ಮಾಲೀಕ ರಂಗಯ್ಯ ಶೆಟ್ಟಿ ಮುಖಕ್ಕೆ ಬಿಸಿ ಎಣ್ಣೆ ಬಿದ್ದರಿಂದ ಚರ್ಮ ಸುಟ್ಟು ಹೋಗಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಮಾನವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಎಣ್ಣೆ ಎರಚಿದ ಗ್ರಾಹಕ ಭೀಮಾ ನಾಯಕ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆ ಹಿನ್ನೆಲೆ:- ಬೆಳಗ್ಗೆ ನಾಷ್ಟ ಮಾಡಲು ಭೀಮಾ ನಾಯಕ ರಂಗಯ್ಯ ಶೆಟ್ಟಿ ಹೋಟೆಲ್ ‌ಗೆ ಹೋಗಿದ್ದಾನೆ, ಇಡ್ಲಿ ಕೊಡು ಎಂದು ಕೇಳಿದ ಇಡ್ಲಿ ಆಗಿಲ್ಲವೆಂದು ಹೇಳಿದ್ದ ಆಗ ಭೀಮಾ ನಾಯಕ ವಾಪಾಸು ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ ಮತ್ತೆ ಬಂದಿದ್ದಾನೆ, ಒಗ್ಗರಣೆ ಮಿರ್ಚಿ ಕೇಳಿದ್ದ ಕೊಡಲು ತಡವಾಗಿದೆ, ಕೋಪಗೊಂಡು ಅಲ್ಲೆ ಸ್ಟವ್ ಮೇಲೆ ಇಟ್ಟಿ ಕಡಾಯಿಯಲ್ಲಿನ ಬಿಸಿ ಎಣ್ಣೆಯನ್ನು ಹೋಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಮೇಲೆ ಎರಚಿ ಪರಾರಿಯಾಗಿದ್ದಾನೆ, ಮುಖ ಸುಟ್ಟು ಹೋಗಿದ್ದ ರಂಗಯ್ಯ ಶೆಟ್ಟಿ ಅವರನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಘಟನೆ ಜರುಗಿದೆ.

Megha News