Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ರೈಲ್ವೆ ನಿಲ್ದಾಣದಲ್ಲಿ ಮೆಟ್ಟಿಲುಗಳಿಗೆ ಕನ್ನಡ ಬಾವುಟ ಬಣ್ಣ ಹಚ್ಚಿ ಅವಮಾನ- ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ

ರೈಲ್ವೆ ನಿಲ್ದಾಣದಲ್ಲಿ ಮೆಟ್ಟಿಲುಗಳಿಗೆ ಕನ್ನಡ ಬಾವುಟ ಬಣ್ಣ ಹಚ್ಚಿ ಅವಮಾನ- ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ

ರಾಯಚೂರು. ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೆಟ್ಟಿಲುಗಳಿಗೆ ಕೆಂಪು ಮತ್ತು ಹಳದಿ ಬಣ್ಣ ಹಚ್ಚಿ ಕರ್ನಾಟಕ ಭಾವುಟಕ್ಕೆ ಅವಮಾನ ಮಾಡಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಕೊಂಡಪ್ಪ ಆಗ್ರಹಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಎರಡನೇಯ ಪ್ಲಾಟ್‌ಫಾರಂ ತೆರಳಿವ ಪಾದಾಚಾರಿ ಮೆಟ್ಟಿಲುಗಳಿಗೆ ಕೆಂಪು ಮತ್ತು ಹಳದಿ ಬಣ್ಣ ಹಚ್ಚಿದ್ದು ತುಳಿದುಕೊಂಡು ಹೋಗುವಂತಾಗಿದೆ.
ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಬಾವುಟವಾಗಿದ್ದು ಜನರು ಬಾವುಟವನ್ನು ತುಳಿದು ಕೊಂಡು ಅವಮಾನ ಮಾಡುತ್ತಿದ್ದಾರೆ.
ರೈಲ್ವೆ ಇಲಾಖೆ ಕರ್ನಾಟಕ ಮತ್ತು ಕನ್ನಡ ಭಾವು ಟಕ್ಕೆ ಅವಮಾನವಾಗಿದೆ. ಮೆಟ್ಟಿಲುಗಳಿಗೆ ಹೆಚ್ಚಿದ ಬಣ್ಣವನ್ನು ಬದಲಿ ಮಾಡಬೇಕು, ಇಲ್ಲದಿದ್ದರೆ ದೂರಿ ನೀಡಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳದಲ್ಲಿದ್ದ ರೈಲ್ವೆ ಸ್ಟೇಷನ್ ಮಾಸ್ಟರ್ ಅವರು ಈ ಬಗ್ಗೆ ಮಾಹಿತಿ ಇಲ್ಲ ತಕ್ಷಣವೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪಟ್ಟು ಬಿಡದ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಸ್ಥಳದಲ್ಲಿಯೇ ಸರಿಪಡಿಸ ಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಾಂತೇಶ, ಎಲ್ ಎಸ್ ವೀರೇಶ, ನವೀನ್ ರಮೇಶ ಸೇರಿದಂತೆ ಇತರರು ಇದ್ದರು.

Megha News