Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಶಾಸಕಿ ಕರಿಯಮ್ಮ ಪುತ್ರನಿಗೆ ಜಾಮೀನು

ಶಾಸಕಿ ಕರಿಯಮ್ಮ ಪುತ್ರನಿಗೆ ಜಾಮೀನು

ದೇವದುರ್ಗ .ಶಾಸಕರಾದ ಕರಿಯಮ್ಮ ನಾಯಕ್ ಇವರ ಪುತ್ರನ ಹಲ್ಲೆ ಪ್ರಕರಣದಲ್ಲಿ ಒಂದನೇಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ವಿಶೇಷ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಜಗದೀಶ್ವರ್ ಇವರು ಶಾಸಕಿ ಪುತ್ರನಾದ ಆರೋಪಿ ಸಂತೋಷ್ ಮತ್ತು ಇತರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ನೀಡಿ ಆದೇಶ ಮಾಡಿದ್ದಾರೆ

ಸದರಿ ಪ್ರಕರಣದಲ್ಲಿ ಟ್ಯಾಕ್ಟರ್ ನಲ್ಲಿ ಮರಳು ಸಾಗಾಟ ಸಂಬಂಧ ದಿನಾಂಕ 11-02-24 ರಂದು ದೇವದುರ್ಗ ಐ.ಬಿಗೆ ಕರೆಸಿ ತನಗೆ ಜಾತಿ ನಿಂದನೆ,ಹಲ್ಲೆ,ಅವಾಚ್ಯ ಶಬ್ದಗಳಿಂದ ನಿಂದನೆ,ಕರ್ತವ್ಯ ಅಡ್ಡಿಪಡಿಸಿದ್ದ ಬಗ್ಗೆ ದೂರುದಾರ ಪೋಲಿಸ್ ಪೇದೆ ಹನುಮಂತರಾಯ ಶಾಸಕ ಪುತ್ರ ಸಂತೋಷ್ ಇನ್ನಿತರ ಮೇಲೆ ಪ್ರಕರಣ ದಾಖಲಿಸಿದ್ದನು
ಸದರಿ ಪ್ರಕರಣವು ರಾಜ್ಯಾದ್ಯಂತ ಚರ್ಚೆಗೆಗ್ರಾಸವಾಗಿತ್ತು ನ್ಯಾಯಾಲಯವು ಆರೋಪಿತರರಾದ ಸಂತೋಷ್, ತಿಮ್ಮಾರೆಡ್ಡಿ, ಮಲ್ಲಪ್ಪ, ಭೀಮಣ್ಣ, ರಮೇಶ್ ,ಇವರಿಗೆ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ
ಆರೋಪಿತರ ಪರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಎನ್ ಶಿವಶಂಕರ್ ವಕೀಲರು ವಾದ ಮಂಡಿಸಿದ್ದರು

Megha News