Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಸರ್ಕಾರಿ ನೌಕರನ ಮೇಲೆ ದಲಿತ ಮುಖಂಡನಿಂದ ಹಲ್ಲೆ ಆರೋಪ

ಸರ್ಕಾರಿ ನೌಕರನ ಮೇಲೆ ದಲಿತ ಮುಖಂಡನಿಂದ ಹಲ್ಲೆ ಆರೋಪ

ರಾಯಚೂರು. ಸರ್ಕಾರಿ ಅಧಿಕಾರಿ ಮೇಲೆ ದಲಿತ ಮುಂಖಂಡನಿಂದ ಹಲ್ಲೆ‌ ನಡೆಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಹಲ್ಲೆಗೊಳಗಾದ ಪಿಎಂಜಿಎಸ್‌ಐ ಕಚೇರಿಯ ಲೆಕ್ಕಾಧಿಕಾರಿಯಾದ ಅಬ್ದುಲ್‌ ರಹೀಮ್ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ಊಟದ ನಂತರ ಕಛೇರಿಗೆ ಬಂದು ಕೆಲಸ ಮಾಡುವ ವೇಳೆ ದಲಿತ ಮುಖಂಡ ನರಸಿಂಹಲು ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟುದ್ದ ಎಂದು ಆರೋಪಿಸಲಾಗಿದೆ, ಹಣ ಕೊಡಲು ನಿರಾಕರಣೆ ಮಾಡಿದ್ದರಿಂದ ಹಲ್ಲೆ ಮಾಡದ್ದಾನೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಅಬ್ದುಲ್ ರಹೀಮ್ ಆರೋಪಿಸಿದ್ದಾರೆ.
ಇಬ್ಬರು ಪರಸ್ಪರವಾಗಿ ಹೊಡೆದಾಡಿಕೊಂಡಿದ್ದಾರೆ‌ ಎನ್ನಲಾಗಿದೆ.ದಲಿತ ಮುಖಂಡ ನರಸಿಂಹಲು ಮೇಲೆ ಕೂಡ ಹಲ್ಲೆ ನಡೆದಿದೆ ಎಂದು ಮೂಲಗಳು ತಿಳಿದು ಬಂದಿವೆ.ಇಬ್ಬರು ರಿಮ್ಸ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತಿದ್ದಾರೆ‌.
ಈ ಕುರಿತು ಪಶ್ಚಿಮ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News