Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ರಸ್ತೆ ಅಪಘಾತ, ಮೃತ ವಿದ್ಯಾರ್ಥಿಗಳ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಸಾಂತ್ವಾನ, ಪರಿಹಾರ ವಿತರಣೆ

ರಸ್ತೆ ಅಪಘಾತ, ಮೃತ ವಿದ್ಯಾರ್ಥಿಗಳ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಸಾಂತ್ವಾನ, ಪರಿಹಾರ ವಿತರಣೆ

ರಾಯಚೂರು. ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ವಿದ್ಯಾರ್ಥಿಗಳ ಮನೆಗೆ ವೈದ್ಯಕೀ ಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋ ಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತು ವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಬೇಟಿ ನೀಡಿ ಸಾಂತ್ವಾನ ಹೇಳಿ ಪೋಷಕರಿಗೆ ಧೈರ್ಯ ತುಂಬಿದರು.

ಮಾನವಿ ತಾಲೂಕಿನ ಕಪಗಲ್ ಬಳಿ ನಡೆದ ಶಾಲಾ ವಾಹನ ಮತ್ತು ಸಾರಿಗೆ ಬಸ್ ಅಪಘಾತ ಕ್ಕೀಡಾಗಿ ಇಬ್ಬರು ಮಕ್ಕಳು ಸಾವನಪ್ಪಿದ್ದರು. ಕುರ್ಡಿ ಗ್ರಾಮದಲ್ಲಿನ ವಿದ್ಯಾರ್ಥಿ ಮನೆಗೆ ಬೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
5 ಲಕ್ಷ ಪರಿಹಾರದ ಚೆಕ್ ಹಾಗೂ ರವಿ ಬೋಸ ರಾಜು ಅವರು ವೈಯಕ್ತಿಕವಾಗಿ ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹಂಪಣಗೌಡ, ವಿದಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಕಾರ್ಯನಿ ರ್ವಾಹಕ ರಾಹುಲ್ ಪಾಂಡ್ವೆ ತುಕಾರಾಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ರಾಯಚೂರು ಸಹಾಯಕ‌ ಆಯುಕ್ತೆ ಮಹಿಬೂಬ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ.ಸುರೇಂದ್ರ ಬಾಬು, ರಿಮ್ಸ್ ನಿರ್ದೇಶಕರು, ರಿಮ್ಸ್ ಆಡಳಿತಾಧಿಕಾರಿ ಡಾ.ದುರುಗೇಶ ಸೇರದಂತೆ ಇತರೆ ಅಧಿಕಾರಿಗಳು‌ ಇದ್ದರು.

Megha News