Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಮಕ್ಕಳ ಆರೋಗ್ಯ ಸುಧಾರಣೆಗೆ ಪರಿಣಾಮಕಾರಿ ಅನುಷ್ಟಾನಕ್ಕೆ ಒತ್ತು ನೀಡಿ-ಡಾ.ಶಿವರಾಜ ಪಾಟೀಲ್

ಮಕ್ಕಳ ಆರೋಗ್ಯ ಸುಧಾರಣೆಗೆ ಪರಿಣಾಮಕಾರಿ ಅನುಷ್ಟಾನಕ್ಕೆ ಒತ್ತು ನೀಡಿ-ಡಾ.ಶಿವರಾಜ ಪಾಟೀಲ್

ರಾಯಚೂರು-ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸರ್ಕಾರ ಬಿಸಿಯೂಟ, ಪೌಷ್ಟಿಕ ಆಹಾರ, ಹಾಲು ನೀಡುವ ಯೋಜ ನೆಗಳು ಜಾರಿಗೊಳಿಸಿದ್ದು ಮಕ್ಕಳು ನಿತ್ಯವೂ ಶಾಲೆಗೆ ಹಾಜರಾಗುವ ಮೂಲಕ ಶಿಕ್ಷಣ ಪಡೆಯಬೇಕೆಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದ ಸಿಯಾತ ಲಾಬ್ ಶಾಲೆಯಲ್ಲಿ ಆರು ದಿನ ಮೊ ಚ್ಛೆ ನೀಡುವ ಯೋಜನೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ದಿಂದ ಮಾತ್ರ ಸಮಾನತೆ ಸಾಧ್ಯವಿದೆ. ಎಲ್ಲಾ ಮಕ್ಕಳು ಶಿಕ್ಷಣ ಪಡೆಯಲು ಪಾಲಕರು ಒತ್ತು ನೀಡಬೇಕಾದ ಅಗತ್ಯವಿದೆ ಎಂದರು. ಸರ್ಕಾರಿ ಶಾ ಲೆಗಳ ಬಗೆಗೆ ಇರುವ ತಾತ್ಸಾರ ಮ ನೋಭಾವ ಬಿಟ್ಟು ಉತ್ತಮ ಶಿಕ್ಷಣ ಪಡೆಯಲು ಎಲ್ಲರೂ ಕೈಜೋಡ ಸಬೇಕಾದ ಅಗತ್ಯವಿದೆ ಎಂದರು. ಶಾಲೆಯಲ್ಲಿ ವಾರದ ಆರು ದಿನ
ಮೊಟ್ಟೆ ವಿತರಿಸುವ ಯೋಜನೆ ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಸಮರ್ಪಕ ಮೊಟ್ಟೆ ವಿತರಿಸುವ ವ್ಯವಸ್ಥೆಯ ಮೇಲೆ ನಿಗಾವಹಿಸಿ ಮಕ್ಕಳ ಆರೋಗ್ಯ ಸುಧಾರಣೆಗೆ ಅಧಿಕಾರಿಗಳು, ಶಿಕ್ಷಕರು ಗಮನಹರಿಸಬೇಕೆಂದರು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ, ಯೂಸೂಫ್ ಖಾನ್, ಬಿಸಿಯೂಟ ಅಧಿಕಾರಿ ಈರಣ್ಣ ಕೋಸಗಿ, ಮೊಯಿಉಲ್ ಹಕ್.ವೆಂಕಟಸ್ವಾಮಿ, ಲಕ್ಷ್ಮಣ ಮ್ಯಾದರ ಸೇರಿದಂತೆ ಬಡಾವಣೆ ಹಿರಿಯರು, ಶಾಲಾ ಶಿಕ್ಷಕರು,

Megha News