Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ತಹಶಿಲ್ದಾರ್ ಕಚೇರಿ ಅಧಿಕಾರಿಗಳ ಕರಾಮತ್ತು ಮೃತಪಟ್ಟಿದ್ದಾರೆಂದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ

ತಹಶಿಲ್ದಾರ್ ಕಚೇರಿ ಅಧಿಕಾರಿಗಳ ಕರಾಮತ್ತು ಮೃತಪಟ್ಟಿದ್ದಾರೆಂದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ

ರಾಯಚೂರು.ತಹಶಿಲ್ದಾರ್ ಕಚೇರಿಯ ಅಧಿಕಾ ರಿಗಳು ನಕಲಿ ದಾಖಲೆ ಸೃಷ್ಠಿಸಿ ಭೂಮಿಯನ್ನು ಕಬಳಿಸಿರುವ ಆರೋಪ ಕೇಳಿ ಬಂದಿದೆ.

ತಾಲೂಕಿನ ಪೋತಗಲ್ ಗ್ರಾಮದ ಸರ್ವೆ ನಂ.172/3ರ 6 ಎಕರೆ ಜಮೀನು ಗ್ರಾಮದ ಗೋವಿಂದಪ್ಪ ಎನ್ನುವವರ ಹೇಸರಿನಲ್ಲಿದ್ದು ಅವರ ಮರಣದ ನಂತರ ಅವರ ಪತ್ನಿ ಸುಶೀ ಲಮ್ಮ ಅವರ ಹೆಸರಿಗೆ ನೊಂದಾಣಿಯಾಗಿತ್ತು.
ಕಳೆದ 15 ವರ್ಷಗಳಿಂದ ಭೂಮಿ ಇದೆ, ಆದರೆ ಸುಶೀಲಮ್ಮ ಮೃತಪಟ್ಟಿದ್ದಾರೆ, ಅವರಿಗೆ ಮಕ್ಕಳಿ ಲ್ಲವೆಂದು ತಹಶಿಲ್ದಾರ್ ಕಚೇರಿಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಠಿಸಿ ಎಸ್‌ಕೆ ನಾಗಿರೆಡ್ಡಿ ಎನ್ನುವ ವರ ಹೆಸರಿಗೆ ನೊಂದಾಣಿ ಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡ ಸುಶೀಲಮ್ಮ ತಮ್ಮ ಮಕ್ಕಳೊಂದಿಗೆ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದಾರೆ, ಸುಶೀಲಮ್ಮ(68) ಅವರು ಬದುಕಿದ್ದು, ಅವರಿಗೆ ಮಕ್ಕಳಿದ್ದಾರೆ, ಆದರೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಕಬಳಿಸಿದ್ದಾರೆ, ಎಂದು ದೂರಿನಲ್ಲಿ ತಿಳಿಸಿದ್ದಾರೆ, ಇದರ ಹಿಂದೆ ಬ್ರೋಕರ್‌ಗಳ ಕೈವಾಡವಿದೆ ಎಂದು ಆರೋಪಿ ಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ‌.

Megha News