Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಮತದಾನದ ಜಾಗೃತಿಗಾಗಿ ನಮ್ಮ ನಡೆ ಮತಗಟ್ಟೆ ಕಡೆ ವಿಶೇಷ ಕಾರ್ಯಕ್ರಮ, ಮತಗಟ್ಟೆಗಳಲ್ಲಿ ಧ್ವಜಾರೋಹಣ, ಮನೆ ಮನೆಗೆ ಮತದಾರರ ಮಾಹಿತಿ ಚೀಟಿ ವಿತರಣೆ

ಮತದಾನದ ಜಾಗೃತಿಗಾಗಿ ನಮ್ಮ ನಡೆ ಮತಗಟ್ಟೆ ಕಡೆ ವಿಶೇಷ ಕಾರ್ಯಕ್ರಮ, ಮತಗಟ್ಟೆಗಳಲ್ಲಿ ಧ್ವಜಾರೋಹಣ, ಮನೆ ಮನೆಗೆ ಮತದಾರರ ಮಾಹಿತಿ ಚೀಟಿ ವಿತರಣೆ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಸ್ವೀಪ್‌ ಸಮಿತಿ, ರಾಯಚೂರು ತಾಲೂಕು ಪಂಚಾಯತ್‌ ವತಿಯಿಂದ ಲೋಕಸಬಾ ಚುನಾವಣೆ ಹಿನ್ನಲೆಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾಯಕ್ರಮದಂಗವಾಗಿ ಏ.28ರ(ಭಾನುವಾರ) ರಾತಯಚೂರು ತಾಲೂಕಿನ ದೇವಸುಗೂರು ಗ್ರಾಮದ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನದ ದಿನಾಂಕವಿರುವ ಧ್ವಜದ ಧ್ವಜಾರೋಹಣ ಮಾಡಲಾಯಿತು.

ಧ್ವಜಾರೋಹಣವನ್ನು ಚುನಾವನಾ ಸಾಮಾನ್ಯ ವೀಕ್ಷಕ ಅಜಯ್‌ ಪ್ರಕಾಶ ಅವರು ನೆರವೇರಿಸಿದರು. ನಂತರ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜಿಲ್ಲೆಯ 1853 ಮತಗಟ್ಟೆಯಲ್ಲಿ ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಈ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಏ.28ರಂದು ದೇವಸುಗೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಎತ್ತಿನ ಬಂಡಿಗಳ ಮೂಲಕ ಮತದಾನ ಜಾಗೃತಿ, ಹಾಗೂ ವೀರಗಾಸೆ ಮ್ರದರ್ಶನ ಸೇರಿದಂತೆ ಇನ್ನಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ನಂತರ ಮನೆ ಮನೆಗೂ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರ ಮಾಹಿತಿ ಚೀಟಿಯನ್ನು ವಿತರಿಸಿ ಮನವಿ ಮಾಡಿಕೊಳ್ಳಲಾಯಿತು.
ಮಕ್ಕಳಿಂದ ಮತದಾನ ಅರಿವು ಕುರಿತು ನಾಟಕ ಪ್ರದರ್ಶನ: ಜನರಲ್ಲಿ ಮತದಾನ ಕುರಿತು ಅರಿವು ಮೂಡಿಸಲು ಹಾಘೂ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಮಕ್ಕಳಿಂದ ನಾಟಕ ಪ್ರದರ್ಶಿಸಲಾಯಿತು. 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರಿಗೆ ಮನೆಯಿಂದ ಮತದಾನಮಾಡುವ ವ್ಯವಸ್ಥೆ ಸೇರಿದಂತೆ ಇನ್ನಿತರ ಮತದಾನದ ಸೌಲಭ್ಯಗಳ ಹಾಗೂ ಸಖಿ ಮತಗಟ್ಟೆ, ಥೀಮ್‌ ಬೇಸ್‌ಡ್‌ ಮತಗಟ್ಟೆ ಸೇರಿದಂತೆ ಇನ್ನಿತರ ಮತಗಟ್ಟೆಗಳ ಕುರಿತು ಅರಿವು ಮೂಡಿಸಲಾಯಿತು.
ವಿಷಯಾಧಾರಿತ(ಥೀಮ್‌ ಬೇಸ್‌ಡ್)‌ ಮತಗಟ್ಟೆ ಉದ್ಘಾಟನೆ: ರಾಯಚೂರು ಐತಿಹಾಸಿಕ ಕೋಟೆ ಮಾದರಿಯ ಮತಗಟ್ಟೆಯನ್ನು ಉದ್ಘಾಟಿಸಲಾಯಿತು. ಈ ಮತಗಟ್ಟೆಗೆ ಐತಿಹಾಸಿಕ ಕೋಟೆ ಹಾಗೂ ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ಮಾದರಿಯ ಚಿತ್ರವನ್ನು ಬಿಡಿಸಲಾಗಿದ್ದು, ಇದರಿಂದ ರಾಯಚೂರು ಇತಿಹಾಸದ ಕುರಿತು ಹಾಗೂ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ರಾಹುಲ್‌ ತುಕಾರಾಮ ಪಾಂಡ್ವೆ, ರಾಯಚೂರು ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ, ಜಿಲ್ಲಾ ಸ್ವೀಪ್‌ ಸಮಿತಿ ನೋಡಲ್‌ ಅಧಿಕಾರಿ ಡಾ.ಬಿ.ವೈ ವಾಲ್ಮೀಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಮತದಾರರ ಸಾಕ್ಷರತಾ ಕ್ಲಬ್‌ನ ದಂಡಪ್ಪ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Megha News