Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲಾ ಆಸ್ಪತ್ರೆ ಸೇರಿದಂತೆ ಉಪ ಕೇಂದ್ರದಲ್ಲಿ ಸ್ವಚ್ಚತೆ, ವಾರದಲ್ಲಿ ಒಂದು ದಿನ ಸ್ವಚ್ಚತಾ ಕಾರ್ಯಕ್ಕೆ ಮೀಸಲು-ಡಾ.ಸುರೇಂದ್ರ ಬಾಬು

ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲಾ ಆಸ್ಪತ್ರೆ ಸೇರಿದಂತೆ ಉಪ ಕೇಂದ್ರದಲ್ಲಿ ಸ್ವಚ್ಚತೆ, ವಾರದಲ್ಲಿ ಒಂದು ದಿನ ಸ್ವಚ್ಚತಾ ಕಾರ್ಯಕ್ಕೆ ಮೀಸಲು-ಡಾ.ಸುರೇಂದ್ರ ಬಾಬು

ರಾಯಚೂರು. ಪ್ರತಿಯೊಬ್ಬರ ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲಾ ಆಸ್ಪತ್ರೆ ಸೇರಿದಂತೆ ಉಪ ಕೇಂದ್ರದ ಆವರಣದಲ್ಲಿ ಸ್ವಚ್ಚತೆ ಆದ್ಯತೆ ನೀಡುವುದರ ಜೊತೆಗೆ ಉತ್ತಮ ವಾತಾವ ರಣ ನಿರ್ಮಾಣ ಮಾಡಲು ವಾರದಲ್ಲಿ ಒಂದು ದಿನ ಸ್ವಚ್ಚತೆ ಮೀಸಲಿಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಲ್ಲಿ ಸ್ವಚ್ಚತಾ ಕಾರ್ಯ ನಡೆಸಿ ಮಾತನಾಡಿದರು,
ಸೆ.14 ರಿಂದ ಅ.2ರವರೆಗೆ ಸ್ವಚ್ಚತೆಯೇ ಸೇವೆ ಕಾರ್ಯಕ್ರಮ ರೂಪಿಸಿದ್ದು, ಈ ಭಾಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಸ್ಪತ್ರೆ, ಸೇರಿದಂತೆ ಉಪ ಕೇಂದ್ರಗಳಲ್ಲಿ ಸಿಬ್ಬಂದಿ ವರ್ಗ, ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ವಾರದಲ್ಲಿ ಒಂದು ದಿನ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಿ ಡೆಂಗ್ಯೂ, ಮಲೇರಿಯಾ, ಸೇರಿದಂತೆ ಇತರೆ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಾ ಜಾಗೃತಿ ಮೂಡಿಸುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ವಚ್ಚತೆ ಆದ್ಯತೆ ನೀಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಉಪ ಕೇಂದ್ರದಲ್ಲಿ ಒಂದು ದಿನ ಸ್ವಚ್ಚತೆಗೆ ಕಾರ್ಯಕ್ಕೆ ಮೀಸಲಿಟ್ಟ ಜನರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸ್ವಚ್ಚತೆ ಇದ್ದಲ್ಲಿ ಯಾವುದೇ ರೋಗಗಳು ಹರಡುವುದಿಲ್ಲ, ಇತ್ತೀಚಿನ ದಿನಗಳ ಡೆಂಗ್ಯೂ ಮಲೇರಿಯಾ, ಇತರೆ ರೋಗಗಳಿಗೆ ಹರಡುವಿಕೆ ಹೆಚ್ಚಿದ್ದು, ನಿಯಂತ್ರಣಕ್ಕಾಗಿ ಹಾಗೂ ಆರೋಗ್ಯಕ್ಕಾಗಿ ನಾವೆಲ್ಲರೂ ಸ್ವಚ್ಚತಾ ಕಾರ್ಯ ಮಾಡಬೇಕು ಎಂದರು.
ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆ ಮತ್ತು ಉಪ ಕೇಂದ್ರಗಳು ನಾವು ಸಹ ನಮ್ಮ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ವೆಂಕಟೇಶ, ಡಾ.ಶಾಕೀರ್, ಡಾ.ಗಣೇಶ, ಡಾ.ಮನೋಹರ ಪತ್ತಾರ, ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Megha News