Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಗಣೇಶ ವಿಸರ್ಜನೆಗೆ ಖಾಸಭಾವಿ ಸ್ವಚ್ಚತೆಗೆ ಸೂಚನೆ

ಗಣೇಶ ವಿಸರ್ಜನೆಗೆ ಖಾಸಭಾವಿ ಸ್ವಚ್ಚತೆಗೆ ಸೂಚನೆ

ರಾಯಚೂರು. ಗಣೇಶ ಮೂರ್ತಿಗಳ ಸಾಮೂ ಹಿಕ ವಿಸರ್ಜನೆಗೆ ನಗರದ ಖಾಸಭಾವಿ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ದುರುಗೇಶ ಹೇಳಿದರು.

ನಗರದ ಮಾವಿನಕೆರೆ ಹತ್ತಿರವಿರುವ ಖಾಸಭಾ ವಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ದರು, ಖಾಸಭಾವಿಯಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿ ಗಳ ವಿಸರ್ಜನೆ ಮಾಡುತ್ತಿದ್ದು, ಖಾಸ ಭಾವಿಯಲ್ಲಿರುವ ಕಸವನ್ನು ತೆಗೆದು ಸ್ವಚ್ಚತಾ ಕಾರ್ಯ ಕೈಗೊಂಡು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಗಣೇಶ ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು, ಸೂಕ್ತ ಬಂದೋಬಸ್ತಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ದಪ್ಪ ಹಿರೇಮಠ, ಸೇರಿದಂತೆ ಅಧಿಕಾರಿಗಳು ಇದ್ದರು.

Megha News