Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ಏಕಾಏಕಿ ಎತ್ತು ಸಾವು, ಸ್ಥಳಕ್ಕೆ ಪಶು ವೈದ್ಯರು ಬೇಟಿ, ವಿಷಜಂತು ಕಚ್ಚಿರುವ ಸಂಶಯ

ಏಕಾಏಕಿ ಎತ್ತು ಸಾವು, ಸ್ಥಳಕ್ಕೆ ಪಶು ವೈದ್ಯರು ಬೇಟಿ, ವಿಷಜಂತು ಕಚ್ಚಿರುವ ಸಂಶಯ

ರಾಯಚೂರು. ತಾಲೂಕಿನ ಗಧಾರ ಗ್ರಾಮದ ರೈತ ಹರಿ ಎಂಬುವವರಿಗೆ ಸೇರಿ ಎತ್ತು ಏಕಾಏಕಿಯಾಗಿ ಸಾವನಪ್ಪಿದ್ದ ಘಟನೆ ನಡೆದಿದೆ.

ಸುಮಾರು 80 ಸಾವಿರ ರೂ. ಮೌಲ್ಯದ ಎರಡು ಎತ್ತುಗಳ ಪೈಕಿ ಒಂದು ಸಾವಿಗೀಡಾಗಿದೆ ಎಂದು ಹೇಳಲಾಗುತ್ತಿದೆ, ಕಳೆದ 8 ತಿಂಗಳ ಹಿಂದೆ 80 ಸಾವಿರ ರೂ ಸಾಲ ಮಾಡಿ ಎರಡು ಎತ್ತುಗಳನ್ನು ಖರೀದಿ ಮಾಡಿದ್ದ ಎಂದು ಎನ್ನಲಾಗಿದೆ.
ಮೂರು ಎಕರೆ ಜಮೀನು ಹೊಂದಿರುವ ಹರಿ ಬೇರೆಯವರ ಜಮೀನನ್ನೂ ಲೀಸ್ ಪಡೆದು ಕೃಷಿ ನಡೆಸುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂ ಸಾಲ ಮಾಡಿದ್ದ, ಮಳೆಯೂ ಕೈಕೊಟ್ಟಿದ್ದು, ಬರಗಾಲ ಪರಿಸ್ಥಿತಿ ಎದುರಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಆರೋಗ್ಯವಾಗಿದ್ದ ಎತ್ತು ಸಾವಿಗೀಡಾಗಿದ್ದರ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಾಹಿತಿ ತಿಳಿ ಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಪಶುವೈ ದ್ಯರು ವಿಶಜಂತು ಕಚ್ಚಿದ್ದರಿಂದ ಎತ್ತು ಸಾವಿಗೀ ಡಾಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಸಾವಿಗೀಡಾದ ಎತ್ತಿಗೆ ಪರಿಹಾರ ನೀಡಲು ಸರ್ಕಾರವು ನನ್ನ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.

Megha News