Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಬಿಡಾಡಿ ದನಗಳ ರಕ್ಷಣೆ ವೇಳೆ ನಗರಸಭೆ ಪೌರಾಯಕ್ತರಿಗೆ ಬೆದರಿಕೆ

ಬಿಡಾಡಿ ದನಗಳ ರಕ್ಷಣೆ ವೇಳೆ ನಗರಸಭೆ ಪೌರಾಯಕ್ತರಿಗೆ ಬೆದರಿಕೆ

ಸಿಂಧನೂರು. ಬಿಡಾಡಿ ದನಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ನಗರಸಭೆ ಪೌರಾಯುಕ್ತರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿದ ಘಟನೆ ನಡೆದಿದೆ.

ಕಳೆದ ತಡರಾತ್ರಿ ರಸ್ತೆಯಲ್ಲಿ ಬಿಡಾಡಿ ದನಗಳನ್ನು ರಕ್ಷಣೆ ಮಾಡಿದ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ತಮ್ಮ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಬಿಡಾಡಿ ದನಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿರು ವಾಗ ಕೆಲ ಕಿಡಿಗೇಡಿಗಳು ಆಕ್ಷೇಪ ವ್ಯಕ್ತಪಡಿ ಸಿದ್ದಾರೆ.
ಬಿಡಾಡಿ ದನಗಳ ವಿಷಯದಲ್ಲಿ ನೋಟಿಸ್ ಕೊಟ್ಟರೂ ವ್ಯಕ್ತಿಗಳು ಬಾರದೇ ಇರುವುದರಿಂದ ರಕ್ಷಣೆ ಮಾಡಲಾಗಿದೆ. ಬಿಡಾಡಿ ದನಗಳ ತಂಟೆಗೆ ಬರಬೇಡ ಎಂದು ಪೌರಾಯುಕ್ತರಿಗೆ ಬೆದರಿಕೆ ಶೈಲಿಯಲ್ಲಿ ಕಿಡಿಗೇಡಿಗಳು ಮಾತನಾಡಿದ್ದಾರೆ. ಪೊಲೀಸರು ಮತ್ತು ಸಿಬ್ಬಂದಿಗಳೊಂದಿಗೆ ಪೌರಾಯುಕ್ತರು, ಹತ್ತಾರು ಬೀದಿ ದನಗಳನ್ನು ವಾಹನಗಳಲ್ಲಿ ಏರಿಸಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Megha News