Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಟಿಫಿನ್ ಮಾಡುವ ನೆಪದಲ್ಲಿ ಕೊಲೆ ಆರೋಪಿ ಪರಾರಿ ಭದ್ರತಾ ಸಿಬ್ಬಂದಿಗಳಿಂದ ಹುಡುಕಾಟ

ಟಿಫಿನ್ ಮಾಡುವ ನೆಪದಲ್ಲಿ ಕೊಲೆ ಆರೋಪಿ ಪರಾರಿ ಭದ್ರತಾ ಸಿಬ್ಬಂದಿಗಳಿಂದ ಹುಡುಕಾಟ

ರಾಯಚೂರು. ಕೊಲೆ ಪ್ರಕರಣದಲ್ಲಿ ವಿಚಾರಣಗೆ ಒಳಗಾಗಿದ್ದ ಖೈದಿ ದೇವದುರ್ಗದ ಉಪ ಕಾರಾಗೃಹ ದಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ಖೈದಿ ಮಸಿಹಾಳ ಗ್ರಾಮದ ನಿವಾಸಿ ಅನ್ವರ ಬಾಷ್ ಎಂದು ತಿಳಿದುಬಂದಿದೆ. ಬೆಳಗ್ಗೆ ಟಿಫಿನ್ ಮಾಡುವ ನೆಪದಲ್ಲಿ ಕಾರಾಗೃಹದ ಭದ್ರತಾ ಸಿಬ್ಬಂದಿ ಜೊತೆಗೆ ಹೊರಗಡೆ ಬಂದಿದ್ದ, ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ, ಇದೀಗ ಖೈದಿ ಅನ್ವರ್ ಬಾಷಾನಿಗಾಗಿ ಕಾರಾಗೃಹ ದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.
ದೇವದುರ್ಗ ತಾಲೂಕಿನ ಮಸಿಹಾಳ ಗ್ರಾಮದ ಲಾಲಸಾಬ್ ಎಂಬಾತನ ಕೊಲೆ ಪ್ರಕರಣದಲ್ಲಿ ಅನ್ವರಬಾಷಾ ಆರೋಪಿಯಾಗಿದ್ದ ಎನ್ನಲಾಗಿದೆ.
ಲಾಲಸಾಬನ ಪತ್ನಿಯೊಂದಿಗೆ ಅನ್ವರಬಾಷಾ ಅನೈತಿಕ ಸಂಬಂಧ ಹೊಂದಿದ್ದ, ಅಡ್ಡಿಯಾಗಿದ್ದ ಲಾಲಸಾಬನನ್ನು ಕೊಲೆ ಮಾಡಲು ಇವರಿಬ್ಬರು ಪ್ಲ್ಯಾನ್‌ ಮಾಡಿ ಕೊಲೆ ಮಾಡಿದ್ದರು,
ಈ ಬಗ್ಗೆ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ದೇವದುರ್ಗ ಸಬ್ ಜೈಲಿಗೆ ಕಳುಹಿಸಿದ್ದರು. ಟಿಫಿನ್ ಮಾಡುವ ನೆಪದಲ್ಲಿ ಯಾಮಾರಿಸಿ ಆರೋಪಿ ಪರಾರಿಯಾಗಿದ್ದಾನೆ.

Megha News