Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಬಸ್‌‌ನ ಆಕ್ಸೆಲ್ ಕಟ್ ಆಗಿ ರಸ್ತೆಯಲ್ಲಿ ಉರುಳಿ ಬಿದ್ದ ಬಸ್, ಒರ್ವ ಸಾವು ಹಲವರಿಗೆ ಗಾಯ

ಬಸ್‌‌ನ ಆಕ್ಸೆಲ್ ಕಟ್ ಆಗಿ ರಸ್ತೆಯಲ್ಲಿ ಉರುಳಿ ಬಿದ್ದ ಬಸ್, ಒರ್ವ ಸಾವು ಹಲವರಿಗೆ ಗಾಯ

ಸಿಂಧನೂರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌‌ನ ಆಕ್ಸೆಲ್ ಕಟ್ ಆಗಿ ಉರುಳಿ ಬಿದ್ದ ಪರಿಣಾಮ ಪ್ರಯಾಣಿಕ ಮೃತಪಟ್ಟಿದ್ದು, ಚಾಲಕ ಸೇರಿದಂತೆ ಅನೇಕರಿಗೆ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಮುಳ್ಳೂರು ಗ್ರಾಮದ ಹತ್ತಿರ ನಡೆದಿದೆ.

ನಾಗಲಾಪೂರ ಗ್ರಾಮದ ಅಯ್ಯಪ್ಪ(35) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕೊಪ್ಪಳ ವಿಭಾಗಕ್ಕೆ ಸೇರಿದ ಬಸ್ಸು ಬೀದರ್‌ ನಿಂದ ಮುದುಗಲ್ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದು ಮುಳ್ಳೂರು ಗ್ರಾಮದ ಹತ್ತಿರ ಬಸ್‌ ಆಕ್ಸೆಲ್ ಮುರಿದು ಹೋಗಿದ್ದರಿಂದ ಬಸ್ಸಿನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ.
ಪ್ರಯಾಣಿಕ ನಾಗಲಾಪೂರ ಗ್ರಾಮದ ಅಯ್ಯಪ್ಪ(35) ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಸ್ಸಿನಲ್ಲಿ 86 ಜನ ಪ್ರಯಾಣಿಕರ ಪೈಕಿ 10 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ತಾವರಗೇರಾ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಹುಸೇನಪ್ಪ ತಿಳಿದ್ದಾರೆ.

Megha News