Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Crime NewsLocal News

2ನೇ ಮದುವೆಗೆ ಅಡ್ಡಿಯಾದ ಮಗುವನ್ನೆ ಕೊಂದ ತಂದೆ

2ನೇ ಮದುವೆಗೆ ಅಡ್ಡಿಯಾದ ಮಗುವನ್ನೆ ಕೊಂದ ತಂದೆ

ಲಿಂಗಸುಗೂರು. 2ನೇ ಮದುವೆಗೆ ಮಗು ಅಡ್ಡಿ ಯಾಗುತ್ತೆ ಎಂದು ಭಾವಿಸಿ ಕೊಂದು ಬಳಿಕ ಕಲ್ಲಿನ‌ ಮುಚ್ಚಿಟ್ಟಿರುವ ದಾರುಣ ಘಟನೆ ತಾಲೂಕಿನ ಮುದ್ಗಲ್ ಸಮೀಪದ ಕನಸಾವಿ ಗ್ರಾಮದಲ್ಲಿ ನಡೆದಿದೆ.

14 ತಿಂಗಳು ಮಗು ಅಭಿನವನನ್ನು ತಂದೆ ಮಹಾಂತೇಶ ಕೊಂದು ಹಾಕಿ ಮುಚ್ಚಿಟ್ಟಿದ್ದಾನೆ.
ಮರು ಮದುವೆ ಆಗಲು ಆಸೆಪಟ್ಟಿದ್ದ ಮಹಾಂ ತೇಶ್‌ ಪತ್ನಿಗೆ ಪರ ಪುರುಷನೊಂದಿಗೆ ಅನೈತಿಕ‌ ಸಂಬಂಧ ಹೊಂದಿದ್ದಳು ಎಂಬ ಸಾಬೂಬು ಉತ್ತರ ನೀಡಿದ್ದಾನೆ.
ಮಹಾಂತೇಶ ಮತ್ತೊಂದು ಮದುವೆಯಾಗುವ ತಯಾರಿ ನಡೆಸಿದ್ದ, ಈ ಮದುವೆ ತನ್ನ ಮಗು ಅಡ್ಡಿಯಾಗುತ್ತದೆ ಎಂದು ಕೊಲೆ ಮಾಡಿ ಕಲ್ಲಿನ ಸಂದಿಯಲ್ಲಿ ಮುಚ್ಚಿಟ್ಟದ್ದಾನೆ.
ಮಗು ಕಾಣೆಯಾದ ಕುರಿತು ನಾಪತ್ತೆ ಪ್ರಕರಣ ವನ್ನು ದಾಖಲಿಸಲಾಗಿತ್ತು, ಪ್ರಕರಣ ಬೆನ್ನತ್ತಿದ ಪೋಲಿಸರು ತಂದೆ ಮಹಾಂತೇಶ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ, ಬಳಿಕ ಮಹಾಂತೇಶ ತಪ್ಪು ಒಪ್ಪಿಕೊಂಡಿದ್ದಾನೆ.
ಮೂರು ದಿನಗಳ ಬಳಿಕ ಮಗುವನ್ನು ಪೊಲೀ ಸರು ಪತ್ತೆ ಮಾಡಿ, ಮಗುವನ್ನು ಹೊರತೆಗೆದು
ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News