Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ನೀರಿಲ್ಲದೆ ನದಿ ಸಂಪೂರ್ಣ ಖಾಲಿ, ಬಿಸಿಲಿನ ತಾಪಕ್ಕೆ ಮೊಸಳೆ ಸಾವು

ನೀರಿಲ್ಲದೆ ನದಿ ಸಂಪೂರ್ಣ ಖಾಲಿ, ಬಿಸಿಲಿನ ತಾಪಕ್ಕೆ ಮೊಸಳೆ ಸಾವು

ರಾಯಚೂರು. ಕೃಷ್ಣ ನದಿಯಲ್ಲಿ ನೀರಿನಲ್ಲದೆ ಬಿಸಿಲಿನ ತಾಪ ತಾಳಲಾರದೇ ಮೊಸಳೆಯೊಂದು ಸಾವನಪ್ಪಿದ ಘಟನೆ ತಾಲೂಕಿನ ಕುರ್ವಕುಲ ಗ್ರಾಮದ ಸಮೀಪದ ಕೃಷ್ಣ ನದಿಯ ಕಲ್ಲು ಬಂಡೆಯ ಮೇಲೆ ಮೃತ ಮೊಸಳೆಯು ಪತ್ತೆಯಾಗಿದೆ.

ಕೃಷ್ಣ ನದಿಯಲ್ಲಿ ನೀರಿನಲ್ಲದೆ ಸಂಪೂರ್ಣವಾಗಿ ನದಿ ಬತ್ತಿ ಹೋಗಿದೆ, ಈ ಹಿನ್ನೆಯಲ್ಲಿ ನದಿಯ ಲ್ಲಿದ್ದ ಜಲಚರಗಳು ನೀರಿಗಾಗಿ ಪರದಾಡುವ ಸ್ಥತಿ ನಿರ್ಮಾಣವಾಗಿದೆ, ನದಿಯಲ್ಲಿ ನೀರಿನಲ್ಲದೆ ಸಾಕಷ್ಟು ಮೀನುಗಳು ಸಾವನಪ್ಪಿದ್ದರೆ, ಸದಾ ಕಾಲ ನೀರಿನಲ್ಲಿ ಇರುವ ಮೊಸಳೆಯ ನದಿಯಲ್ಲಿ ನೀರಿನಲ್ಲದೆ ಇರುವುದುರಿಂದ ಬಿಸಿಲಿನ ತಾಪಕ್ಕೆ ಮೊಸಳೆ ಮೃತಪಟ್ಟಿದ್ದು ಮೊಸಳೆಯ ದೇಹ ಬಂಡೆಯ ಮೇಲೆ ಮೃತಪಟ್ಟಿರುವುದನ್ನು ಕಾಣಬಹುದಾಗಿದೆ.
ಜಿಲ್ಲಾಡಳಿತ ಕೃಷ್ಣ ನದಿಗೆ ನೀರು ಹರಿಸಲು ಮುಂದಾಗಿಬೇಕು ಇಲ್ಲದೆ ಇದ್ದರೆ ನೀರಿಲ್ಲದೆ ಜಲಚರಗಳ ಸಂಪೂರ್ಣವಾಗಿ ಸಾವನಪ್ಪಲಿವೆ.

Megha News