Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಸೈಕಲ್ ರೈಡರ್ಸ್ ಗೆ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಸನ್ಮಾನ

ಸೈಕಲ್ ರೈಡರ್ಸ್ ಗೆ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಸನ್ಮಾನ

ರಾಯಚೂರು. ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಸೈಕಲ್ ರೈಡರ್ಸ್ ಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ನಗರದ ಖಾಸಗಿ ಹೊಟೇಲ್ ನಲ್ಲಿ ರಾಯಚೂರು ಸೈಕಲ್ ರೈಡರ್ಸ್ ಅಸೋಸಿಯೇಷನ್ 16 ಸದಸ್ಯರು ಶ್ರೀನಗರದಿಂದ ಕಾರ್ಗಿಲ್ ವರೆಗೆ ಸುಮಾರು 416 ಕಿ.ಮೀ ಸೈಕಲ್ ತುಳಿಯುತ್ತಾ ಕ್ರಮಿಸಿ, ಕಾರ್ಗಿಲ್ ವಿಜಯ ದಿವಸ್ ಆಚರಿಸಿದ್ದರು.
ಈ ಹಿನ್ನಲೆಯಲ್ಲಿ ರಾಯಚೂರು ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ನ ಅಧ್ಯಕ್ಷ ವಿಶ್ವನಾಥ ಸ್ವಾಮಿ ಹಿರೇಮಠ ಅವರು ಸನ್ಮಾನಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಶ್ವನಾಥ ಸ್ವಾಮಿ ಹಿರೇಮಠ ಅವರ 49 ನೇ ಹುಟ್ಟು ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಬಸವರಾಜ ಪಾಟೀಲ, ಡಾ.ಸಕಲೇಶ ಪಾಟೀಲ್, ಮಲ್ಲಿಕಾರ್ಜುನ ಸಿಂಗಡದಿನ್ನಿ, ಬಸವರಾಜ ನಾಗಡದಿನ್ನಿ, ಡಾ. ಪಾಟೀಲ , ರವಿ ಗಣೇಕಲ್ ಪಾಟೀಲ ತೋರಣದಿನ್ನಿ, ಪವನಗೌಡ, ಸಂದೀಪ ಕಲ್ಲೂರ್, ನಾಗರಾಜ ಗಡಾಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Megha News