Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಬ್ಯಾನರ್‌ನಲ್ಲಿ ಕನ್ನಡ ಮಾಯ ಹಿಂದಿಗೆ ಆಧ್ಯತೆ ಕನ್ನಡಪರ ಸಂಘಟನೆಗಳಿಂದ ಆಕ್ರೋಶ

ಬ್ಯಾನರ್‌ನಲ್ಲಿ ಕನ್ನಡ ಮಾಯ ಹಿಂದಿಗೆ ಆಧ್ಯತೆ ಕನ್ನಡಪರ ಸಂಘಟನೆಗಳಿಂದ ಆಕ್ರೋಶ

ರಾಯಚೂರು. ನಗರದ ಎಪಿಎಂಸಿ ಅವರಣದಲ್ಲಿ ಕೇಂದ್ರ ಸರ್ಕಾರದ ಭಾರತ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಬ್ಯಾನರ್‌ನಲ್ಲಿ ಕನ್ನಡ ಪದ ಬಳಕೆ ಮಾಡದೇ ಹಿಂದಿಗೆ ಮಾನ್ಯತೆ ನೀಡಿದ್ದು, ಕನ್ನಡಪರ ಸಂಘಟನೆ ಮುಖಂಡರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಆಕ್ಷೇಪ ವ್ಯಕ್ತಪಡಿಸಿ ಘಟನೆ ನಡೆಯಿತು.

ನಗರದ ಎಪಿಎಂಸಿ ಗಂಜ್ ಆವರಣದಲ್ಲಿ ಕೇಂದ್ರ ಸರ್ಕಾರದ ಭಾರತ ಅಕ್ಕಿ ವಿತರಣೆ ಯೋಜನೆ ಏರ್ಪಡಿಸಿದ್ದು, ಬ್ಯಾನರ್ ನಲ್ಲಿ ಕನ್ನಡ ಹಿಂದಿಗೆ ಮಾತ್ರ ಆದ್ಯತೆ ನೀಡಿದ್ದು, ಕನ್ನಡಕ್ಕೆ ಅವಮಾನ ಮಾಡಲಾಗಿದೆ.
ನಾಫಿಡ್ ಸಂಸ್ಥೆ ಅಧಿಕಾರಿಗಳು ಬೇಜಾವ್ದಾರಿ ತೋರಿದ್ದು, ಈ ಬಗ್ಗೆ ಕಾರ್ಯಕ್ರಮಕ್ಕೆ ಅಡ್ಡಿಪಡಿ ಸಿದ ಕನ್ನಡಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಶಿವರಾಜ ಪಾಟೀಲ್ ಹಾಗೂ ಸಂಸದ ರಾಜಾ ಅಮರೇಶ್ವರ ಪಾಟೀಲ್ ಮಧ್ಯ ಪ್ರವೇಶಿಸಿ ಅಧಿಕಾರಿಗಳ ತಪ್ಪಿನಿಂದ ಈ ಕೆಲಸವಾಗಿದೆ, ಮುಂದಿನ ದಿನಗಳಲ್ಲಿ ಇಂತಹ ಕೆಲಸ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಮಾಧಾನ ಮಾಡಿದರು.

Megha News