Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

National News

ದೇಶದಲ್ಲಿ ಮೊದಲ ಬಾರಿಗೆ ತೈಲ ನಿಕ್ಷೇಪ ಪತ್ತೆ, ಕೃಷ್ಣ ಗೋದಾವರಿ ಬೇಸ್​ನ 30 ಕಿಲೋ ದೂರದಲ್ಲಿ ಪತ್ತೆ

ದೇಶದಲ್ಲಿ ಮೊದಲ ಬಾರಿಗೆ ತೈಲ ನಿಕ್ಷೇಪ ಪತ್ತೆ, ಕೃಷ್ಣ ಗೋದಾವರಿ ಬೇಸ್​ನ 30 ಕಿಲೋ ದೂರದಲ್ಲಿ ಪತ್ತೆ

ದೆಹಲಿ.ಕೃಷ್ಣ ಗೋದಾವರಿ ಬೇಸ್​ನ 30 ಕಿಲೋ ದೂರದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ. ಮೇ ಅಥವಾ ಜೂನ್​ನಲ್ಲಿ ಈ ಭಾಗದಲ್ಲಿ ತೈಲ ಮತ್ತು ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ  ಹೇಳಿದ್ದಾರೆ.

ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿ.ಮೀ ದೂರದಲ್ಲಿ, ಮೊದಲ ಬಾರಿಗೆ ತೈಲವನ್ನ ಹೊರತೆಗೆಯಲಾಯಿತು.ಇದರ ಕಾಮಗಾರಿ 2016-17ರಲ್ಲಿ ಪ್ರಾರಂಭವಾಯಿತು, ಆದರೆ ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಯಿತು. ಅಲ್ಲಿನ 26 ಬಾವಿಗಳಲ್ಲಿ 4 ಬಾವಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಮೇ ಮತ್ತು ಜೂನ್ ವೇಳೆಗೆ, ದಿನಕ್ಕೆ 45,000 ಬ್ಯಾರೆಲ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಉತ್ಪಾದನೆಯು ನಮ್ಮ ದೇಶದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇಕಡಾ 7 ರಷ್ಟು ಮತ್ತು ನಮ್ಮ ಅನಿಲ ಉತ್ಪಾದನೆಯ ಶೇಕಡಾ 7 ರಷ್ಟನ್ನು ಹೊಂದಿರುತ್ತದೆ ಎಂದರು.

Megha News